ಹಾವೇರಿಯಲ್ಲಿ ನಡೆಯುವ ಅಗ್ನಿಪಥ್ ಆಯ್ಕೆ ಶಿಬಿರಕ್ಕೆ ಸುಳ್ಯದಿಂದ 105 ಯುವಕರು

0

ಸಚಿವ ಎಸ್.ಅಂಗಾರರಿಂದ ಉಚಿತ ಬಸ್ ವ್ಯವಸ್ಥೆ

ಹಾವೇರಿಯಲ್ಲಿ ನಡೆಯಲಿರುವ ಅಗ್ನಿಪಥ್ ರ್ಯಾಲಿ (ಸೇನೆಯ ಆಯ್ಕೆ ಶಿಬಿರ) ಯಲ್ಲಿ ಸುಳ್ಯದಿಂದ 105 ಮಂದಿ ಭಾಗವಹಿಸಲಿದ್ದಾರೆ.

ಸುಳ್ಯ ಕ್ಷೇತ್ರದ ಅಗ್ನಿವೀರ್ ಆಕಾಂಕ್ಷಿಗಳಿಗೆ ಮೀನುಗಾರಿಕೆ, ಬಂದರು ಮತ್ತು ಒಡನಾಡು ಜಲ ಸಾರಿಗೆ ಸಚಿವರು ಮತ್ತು ಸುಳ್ಯ ಕ್ಷೇತ್ರದ ಶಾಸಕರಾದ ಎಸ್ ಅಂಗಾರರವರು ಪ್ರಯಾಣಕ್ಕೆ ಬಸ್ಸಿನ ವ್ಯವಸ್ಥೆ ಮಾಡಿದ್ದು ಸುಳ್ಯದಿಂದ ಹಾವೇರಿಗೆ ಎರಡು ಬಸ್ಸಿನಲ್ಲಿ 105 ಯುವಕರನ್ನು ಕಳುಹಿಸುವ ವ್ಯವಸ್ಥೆ ಮಾಡಲಾಯಿತು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಯುವಕರಿಗೆ ಶುಭಹಾರೈಸಿದರು, ಮಂಡಲ ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕೇರ್ಪಳ, ಚಂದ್ರಶೇಖರ ನೆಡಿಲ್ ಉಪಸ್ಥಿತರಿದ್ದರು