ಎಣ್ಮೂರು: ಶ್ರೀ ಕೋಟಿ ಚೆನ್ನಯರ ಗರಡಿಯಲ್ಲಿ ಚೌತಿ ಹಬ್ಬ ಕದಿರುತ್ಸವ

0

ಎಣ್ಮೂರು ಶ್ರೀನಾಗಬ್ರಹ್ಮ ಕೋಟಿ ಚೆನ್ನಯರ ಗರಡಿಯಲ್ಲಿ ಚೌತಿಯ ದಿನದಂದು ಬಾಗಿಲು ತೆರೆಯುವ ಕಾರ್ಯಕ್ರಮ ಮತ್ತು ಚೌತಿ ಹಬ್ಬ ಕದಿರು ಉತ್ಸವ ನಡೆಯಿತು. ಬೆಳಿಗ್ಗೆ ತಂಬಿಲ ಸೇವೆ ನಡೆದು ದರ್ಶನ ಸೇವೆ, ತೆನೆ ವಿತರಣೆ ನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಅನುವಂಶಿಕ ಆಡಳ್ತೆದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ಮತ್ತು ಪದ್ಮಾ ಆರ್ ಶೆಟ್ಟಿ, ಕಟ್ಟಬೀಡು ಕುಟುಂಬಸ್ಥರು, ಭಕ್ತರು ಉಪಸ್ಥಿತರಿದ್ದರು.