ಸುಳ್ಯ ಕ್ರೀಡಾ ಭಾರತಿ ಘಟಕದಿಂದ ಹಿರಿಯ ಕ್ರೀಡಾಪಟು ರಾಘವ ಅತ್ಯಾಡಿಯವರಿಗೆ ಸನ್ಮಾನ

0

ಕನಾಟಕ ರಾಜ್ಯ ಕ್ರೀಡಾ ಭಾರತಿ ಹಾಗೂ ಜಿಲ್ಲಾ ಕ್ರೀಡಾ ಭಾರತಿ ಆಶಯದಂತೆ ಸುಳ್ಯ ಕ್ರೀಡಾ ಭಾರತಿ ಘಟಕದ ವತಿಯಿಂದ ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ರವರ ಹುಟ್ಟು ಹಬ್ಬದ ದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಕ್ರೀಡಾದಿನಾಚರಣೆಯನ್ನು ಸುಳ್ಯ ಕ್ರೀಡಾ ಭಾರತಿ ಘಟಕದ ವತಿಯಿಂದ ಹಿರಿಯ ಕ್ರೀಡಾಪಟು, ಕ್ರೀಡಾ ಸಾಧಕ ರಾಘವ ಅತ್ಯಾಡಿ ರವರನ್ನು ತಮ್ಮ ನಿವಾಸದಲ್ಲಿ ಸನ್ಮಾನಿಸಲಾಯಿತು. ಸುಳ್ಯ ಕ್ರೀಡಾ ಭಾರತಿ ಘಟಕದ ಅಧ್ಯಕ್ಷರಾದ ಎ.ಸಿ.ವಸಂತ್ ರವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ದೊಡ್ಡಣ್ಣ ಬರಮೇಲು, ಶರತ್ ಅಡ್ಕಾರ್ ಹಾಗೂ ಸದಸ್ಯರಾದ ಸುಬ್ರಹ್ಮಣ್ಯ ಕೆ.ಎಂ., ಹರಿಪ್ರಕಾಶ್ ಅಡ್ಕಾರ್ ಉಪಸ್ಥಿತರಿದ್ದರು.