ಅಮರಮುಡ್ನೂರು ಕಂಜರ್ಪಣೆ ರಸ್ತೆ ಮೇಲೆ ಬರೆ ಕುಸಿತ – ಮಣ್ಣು ತೆರವುಗೊಳಿಸಿದ ಪಂಚಾಯತ್

0

ಅಮರಮುಡ್ನೂರು ಗ್ರಾಮದ ಕಂಜರ್ಪಣೆ ಕಡೆಗೆ ಸಂಚರಿಸುವ ರಸ್ತೆ ಮಧ್ಯೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಬರೆ ಕುಸಿತಗೊಂಡು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.ಪಂಚಾಯತ್ ಸದಸ್ಯೆ ದಿವ್ಯ ಮಡಪ್ಪಾಡಿ ಯವರ ನೇತೃತ್ವದಲ್ಲಿ ಜೆ.ಸಿ.ಬಿ.ಮೂಲಕ ರಸ್ತೆಯ ಮೇಲೆ ಬಿದ್ದ ಮಣ್ಣನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.