ದೊಡ್ಡತೋಟ : ಶ್ರೀರಾಮ ಭಜನಾ ಮಂದಿರದಲ್ಲಿ ವಾರ್ಷಿಕ ಭಜನೆ ಕಾರ್ಯಕ್ರಮ-ಗೌರವಾರ್ಪಣೆ

0

 

 

ದೊಡ್ಡತೋಟ ಶ್ರೀ ರಾಮ ಭಜನಾ ಮಂದಿರದಲ್ಲಿ ವಾರ್ಷಿಕ ಭಜನಾ ಕಾರ್ಯಕ್ರಮವು ಸೆ.8ರಂದು ನಡೆಯಿತು.

 

ಭಜನಾ ಕಾರ್ಯಕ್ರಮಗಳು ನಿಂತು ಜೀರ್ಣಾವಾಗಿದ್ದ ಭಜನಾ ಮಂದಿರವನ್ನು ಸ್ಥಳೀಯರು ಸೇರಿ ದುರಸ್ಥಿ ಗೊಳಿಸಿ ಸಮಿತಿಯನ್ನು ಪುನರ್ ರಚಿಸಿ ಭಜನಾ ಕಾರ್ಯಕ್ರಮ ಆರಂಭಿಸಿದ್ದರು. ಅಲ್ಲದೇ ಜೀರ್ಣೋದ್ಧಾರದ ಸಂಕಲ್ಪವನ್ನು ತೊಟ್ಟು ಸಮಿತಿ ರಚಿಸಲಾಗಿತ್ತು. ಊರವರ ಸಹಕಾರದೊಂದಿಗೆ ಭಜನಾ ಸೇವೆ ಪುನರಾರಂಭಿಸಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಾರ್ಷಿಕ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಹಾಗೂ
ಇದೇ ಸಂದರ್ಭದಲ್ಲಿ ಭಜನಾ ಕಾರ್ಯಕ್ರಮ ಆರಂಭದ ಸಂದರ್ಭದಲ್ಲಿ ಸಹಕಾರ ನೀಡಿದ ಶ್ರೀ ಚಾಮುಂಡೇಶ್ವರಿ ಭಜನಾ ಸಂಘ ಕೊರತ್ತೋಡಿ ಇದರ ಸದಸ್ಯರನ್ನು ಶ್ರೀ ರಾಮ ಭಜನಾ ಮಂಡಳಿ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಹಿಮಕರ ನೆಲ್ಲಿಕಜ, ಮಹೇಶ್ ಮೇರ್ಕಜೆ, ಮಾಧವ ನಂದಗೋಕುಲ, ಹೇಮಚಂದ್ರ ನಂದಗೋಕುಲ, ಪ್ರವೀಣ್ ರಾವ್, ಶರತ್ ಕಾಸಿನಗೋಡ್ಲು, ಭಾನುಪ್ರಕಾಶ್ ಮತ್ತಿತರರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದೀ ಯೋಜನೆ ಗುತ್ತಿಗಾರು ವಲಯದ ಅಧ್ಯಕ್ಷರಾದ ಭಾಸ್ಕರ‌ ರಾವ್ ಚೆನ್ನಡ್ಕ, ತಾಲೂಕು ಭಜನಾ ಪರಿಷತ್ ನ ರವಿಚಂದ್ರ ಕೊಡಪಾಲ ಸೇರಿದಂತೆ ಊರವರು ಮಕ್ಕಳು ಭಾಗವಹಸಿದ್ದರು.