ಕೋಲ್ಚಾರು : ಕೃಷಿ ತೋಟಕ್ಕೆ ಕಾಡಾನೆ ದಾಳಿ-ಅಪಾರ ಪ್ರಮಾಣದ ಹಾನಿ

0

 

ಆಲೆಟ್ಟಿ ಗ್ರಾಮದ ಕೋಲ್ಚಾರು ಭಾಗದ ಕೃಷಿ ತೋಟಕ್ಕೆ ಕಾಡಾನೆ ದಾಳಿ ನಡೆಸಿದ್ದು ಅಪಾರ ಪ್ರಮಾಣದಲ್ಲಿ ಕೃಷಿ ಬೆಳೆಗಳಿಗೆ ಹಾನಿ ಸಂಭವಿಸಿದ್ದು ನಷ್ಟ ಉಂಟಾಗಿದೆ.


ಕೋಲ್ಚಾರು ನಾಂಗುಳಿ ಪುರುಷೋತ್ತಮ ಗೌಡ ರವರ ತೋಟಕ್ಕೆ ನುಗ್ಗಿ ಸುಮಾರು 8 ತೆಂಗಿನ ಮರ ಹಾಗೂ 80 ರಷ್ಟು ಅಡಿಕೆ ಮರಗಳನ್ನು ನಾಶ ಮಾಡಿರುವುದಾಗಿ ತಿಳಿದು ಬಂದಿದೆ. ಈ ಭಾಗದಲ್ಲಿ ಹಲವು ದಿನಗಳಲ್ಲಿ ನಿರಂತರ ಕಾಡಾನೆಗಳು ದಾಳಿ ನಡೆಸುತ್ತಿದ್ದು ಕೃಷಿಕರು ಕಷ್ಟ ನಷ್ಟ ಅನುಭವಿಸುತ್ತಿದ್ದಾರೆ.