ಸುಳ್ಯ ಯುವಜನ ಸಂಯುಕ್ತ ಮಂಡಳಿ ವಾರ್ಷಿಕ ಮಹಾಸಭೆ

0

 

ಮಂಡಳಿಯ ಲೋಗೊ ಅನಾವರಣ : ಕು.ಸಾಹಿತ್ಯರಿಗೆ ಯುವ ಪ್ರಶಸ್ತಿ ಪ್ರದಾನ

ಸುಳ್ಯ ಯುವಜನ ಸಂಯುಕ್ತ ಮಂಡಳಿ ವಾರ್ಷಿಕ ಮಹಾಸಭೆಯು ಸೆ.10 ರಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆಯಿತು.

 

ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಯಾನಂದ ಕೇರ್ಪಳರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಮುಖ್ಯ ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ, ಯುವಜನ ಸೇವಾ ಸಂಸ್ಥೆ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಯುವಜನ ಸಂಯುಕ್ತ ಮಂಡಳಿ ಗೌರವಾಧ್ಯಕ್ಷ ಅನಿಲ್ ಪೂಜಾರಿಮನೆ ವೇದಿಕೆಯಲ್ಲಿದ್ದರು.

ಲಾಂಛನ ಅನಾವರಣ : ಯುವಜನ ಸಂಯುಕ್ತ ಮಂಡಳಿಗೆ ಲಾಂಛನವನ್ನು ರಚಿಸಲಾಗಿದ್ದು ಅದರ ಅನಾವರಣವೂ ನಡೆಯಿತು. ಸಭಾಭವನಕ್ಕೆ ಹೊಸ ಪರದೆ ಅಳವಡಿಕೆ, ಹೊಸ ಪೋಡಿಯಂ,ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ ಅಧ್ಯಕ್ಷ – ಕಾರ್ಯದರ್ಶಿಗಳು ಹೆಸರುಗಳ ನಾಮಫಲಕ ಅನಾವರಣವೂ‌ ನಡೆಯಿತು.

ಯುವ ಪ್ರಶಸ್ತಿ ಪ್ರದಾನ : ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಸಂದರ್ಭದಲ್ಲಿ ದೆಹಲಿ ಸ್ವಾತಂತ್ರ್ಯ ಪೆರೆಡ್ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಕು.ಸಾಹಿತ್ಯ ಕೇರ್ಪಳ ರಿಗೆ ಯುವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಂಸ್ಥೆ ಕೋಶಾಧಿಕಾರಿ ವಿಜಯ ಕುಮಾರ್ ಉಬರಡ್ಕ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಸತೀಶ್ ಮೂಕಮಲೆ ವರದಿ ಮಂಡಿಸಿದರು. ಪ್ರವೀಣ್ ಕುಮಾರ್ ಜಯನಗರ ಸನ್ಮಾನಿತರನ್ನು ಪರಿಚಯಿಸಿದರು. ಆರ್.ಕೆ. ಮಹಮ್ಮದ್ ಕಾರ್ಯಕ್ರಮ ನಿರೂಪಿಸಿದರು.