ಅಮರಪಡ್ನೂರು ಗ್ರಾಮದ ಶೇಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ
ದಿ. ವಸಂತ ಕುಮಾರ್ ಕೋಟೆಯವರ ಸ್ಮರಣಾರ್ಥ ಕೋಟೆ ಪೌಂಡೇಶನ್ ಮತ್ತು ರೈಟ್ ಟೂ ಲೈವ್ ಸಂಸ್ಥೆಯ ವತಿಯಿಂದ ರಘುರಾಮ ಕೋಟೆಯವರ ನೇತೃತ್ವದಲ್ಲಿ ಉಚಿತ ಬ್ಯಾಗ್ ವಿತರಣಾ ಕಾರ್ಯಕ್ರಮ ಸೆ.10 ರಂದು ನಡೆಯಿತು.
ಸುಮಾರು 47 ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು. ವೇದಿಕೆಯಲ್ಲಿ ಹಿರಿಯರಾದ ಶ್ರೀಮತಿ ಪಾರ್ವತಿ ಕೊಟೆ, ಗಣಪಯ್ಯ ವನಶ್ರೀ ಪೆರುವಾಜೆ , ಶಶಿಕಲಾ , ಎಸ್. ಡಿ. ಎಂ. ಸಿ ಅಧ್ಯಕ್ಷ ಮಾಧವ ಟಿ.ಪಿ, ಮುಖ್ಯ ಶಿಕ್ಷಕ ಪ್ರಭಾಕರ ಎಂ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸ್ .ಡಿ. ಎಂ. ಸಿ ಸದಸ್ಯರು, ಪೋಷಕರು ಶಿಕ್ಷಕಿಯರಾದ ಶ್ರೀಮತಿ ಸವಿತಾ, ಮಂಗಳ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಹ ಶಿಕ್ಷಕ ರಂಗಯ್ಯ ಸ್ವಾಗತಿಸಿ, ವಂದಿಸಿದರು.