ಅಡ್ಕಾರು ಅಯ್ಯಪ್ಪ ಮಂದಿರದ ಪರಿಸರದಲ್ಲಿ ಸ್ವಚ್ಚತಾ ಕಾರ್ಯ

0

ಜಾಲ್ಸೂರು ಗ್ರಾಮದ ಅಡ್ಕಾರು ಅಯ್ಯಪ್ಪ ಮಂದಿರದ ಪರಿಸರದಲ್ಲಿ ಸ್ವಚ್ಛತಾ ಕಾರ್ಯವು ಸೆ.11ರಂದು ಜರುಗಿತು.
ಸ್ಥಳೀಯರು ಸೇರಿ ಅಯ್ಯಪ್ಪ ಮಂದಿರದ ಸುತ್ತಮುತ್ತಲಿನಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.
ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಅಶೋಕ ಅಡ್ಕಾರು, ಪ್ರ. ಕಾರ್ಯದರ್ಶಿ ಮನು ಪದವು, ಚಂದ್ರಶೇಖರ ಅಡ್ಕಾರು, ವಾಸುನಾಯ್ಕ, ಕಿರಣ ಬೆಳ್ಳಿಪ್ಪಾಡಿ, ಹರೀಶ ಕೋನಡ್ಕಪದವು, ಹರೀಶ್ ಕಲ್ಲಡ್ಕ, ಕರುಣಾಕರ ಅಡ್ಕಾರುಬೈಲು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದು, ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.