ಜೇಸೀ ಸಪ್ತಾಹದ ನಾಲ್ಕನೇ ದಿನದ ಕಾರ್ಯಕ್ರಮ ಹಸಿರೇ ಉಸಿರು ಗಿಡಕ ನೋಡುವ ಕಾರ್ಯಕ್ರಮವು ಜೆ ಸಿ ಐ ಸುಳ್ಯ ಸಿಟಿ ವತಿಯಿಂದ ಬಳ್ಳಡ್ಕದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಜೇಸಿಐ ಸುಳ್ಯ ಸಿಟಿ ಉಪಾಧ್ಯಕ್ಷರಾದ ಅಶ್ವತ್ ಅಡ್ಕಾರ್ ವಹಿಸಿದ್ದರು. ಅಭಿಜ್ಞಾ ಬೊಮ್ಮೆಟ್ಟಿ ಕಾರ್ಯಕ್ರಮವನ್ನು ಗಿಡ ನೆಡುವುದರೊಂದಿಗೆ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಉಪನ್ಯಾಸಕಿ ಪ್ರಮೀಳಾ ಮನಮೋಹನ್ ಅಧ್ಯಾಪಕರಾದ ವಿಷ್ಣು ನಾರ್ಕೊಡು ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷ ಬಶೀರ್ ಯು ಪಿ, ಸ್ಥಾಪಕ ಮನಮೋಹನ್ ಬಳ್ಳಡ್ಕ, ಪೂರ್ವ ಅಧ್ಯಕ್ಷ ವಿನಯ್ ರಾಜ್ ಮಡ್ತಿಲ, ಸಹನಾ ಅಭಿಜ್ಞಾ ಬೊಮ್ಮೆಟ್ಟಿ ಮತ್ತು ಮಹಾದೇವ ಬಳ್ಳಡ್ಕ ಉಪಸ್ಥಿತರಿದ್ದರು.