ಎಸ್.ಎಸ್.ಎಲ್.ಸಿ. ಸಾಧಕ ಸಾತ್ವಿಕ್ ಕಜೆಮೂಲೆಯವರ ಮನೆಯಲ್ಲಿ ಸನ್ಮಾನ

0

ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯು ಸೆ. 10ರಂದು ಜರುಗಿತ್ತು. ಈ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.

ಸಂಘದ ಸಹ ಸದಸ್ಯರಾದ ಡಾ. ಶಶಿಧರ್ ಹೆಚ್.ಎಸ್ ಕಜೆಮೂಲೆ ಇವರ ಮಗ ಸಾತ್ವಿಕ ಎಚ್.ಎಸ್ ರವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಸಾಧ್ಯವಾಗಿದ್ದು, ಇವರಿಗೆ ಸೆ. 12ರಂದು ಸಂಘದ ಅಧ್ಯಕ್ಷರಾದ ಎಂ. ಕೂಸಪ್ಪ ಗೌಡ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ನಾಯಕ್ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಸಾತ್ವಿಕ್ ರ ತಂದೆಗೆ ಪ್ರೋತ್ಸಾಹಕ ಬಹುಮಾನವನ್ನು ಹಸ್ತಾಂತರಿಸಿದರು. ಸಾತ್ವಿಕ್ ಹೆಚ್.ಎಸ್ ರವರು ಕಳೆದ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡಿದ್ದು 625 ಅಂಕ ಪಡೆದಿರುತ್ತಾರೆ.