ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ ಕ್ಕೆ ಆಯ್ಕೆ.

0

(ಮನು ಶ್ರೀನಿವಾಸ್ ನಾಯ್ಕ್)

ಸ 14.ರಂದು ಮೂಡಬಿದಿರೆಯ ಮಹಾವೀರ ಕಾಲೇಜಿನಲ್ಲಿ ನಡೆದ ಪದವಿ ಪೂರ್ವ ವಿಭಾಗದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸುಳ್ಯದ ನೆಹರು ಮೆಮೋ ರಿಯಲ್ ಪಪೂ ಕಾಲೇಜು ತಂಡ ತೃತೀಯ ಸ್ಥಾನ ಗಳಿಸಿದ್ದು ತಂಡದ ಆಟಗಾರರಾದ ಮನು ಶ್ರೀನಿವಾಸ್ ನಾಯ್ಕ್ (ದ್ವಿತೀಯ ಕಲಾ ವಿಭಾಗ ) ತುಕಾರಾಮ್ ಮಣಿಗೆಣಪ್ಪ ಮೋಟೆ (ಪ್ರ ಕಲಾ ವಿಭಾಗ )ಇವರು ಮಂಡ್ಯದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಕಬಡ್ಡಿ ತಂಡವನ್ನು ಪ್ರತಿನಿಧಿಸಲಿದ್ದಾರೆ.

(ತುಕಾರಾಮ್ ಮಣಿಗೆಣಪ್ಪ ಮೋಟೆ)

ಇವರಿಗೆ ದೈ ಶಿ ನಿರ್ದೇಶಕ ನಾಗರಾಜ್ ನಾಯ್ಕ್ ಭಟ್ಕಳ ತರಬೇತಿ ನೀಡಿದ್ದರು.ಈ ವಿದ್ಯಾರ್ಥಿಗಳು ಕೆ ವಿ ಜಿ ಸ್ಪೋರ್ಟ್ಸ್ ಅಕಾಡಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.ಸಾಧಕ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ,ಪ್ರಾ oಶುಪಾಲರು,ಬೋಧಕ -ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.