ಯೇನೆಕಲ್ಲು ಸಹಕಾರಿ ಸಂಘದ ರೈತ ಬಜಾರಿನಲ್ಲಿ ಕೆ.ಎಂ.ಎಫ್. ಉತ್ಪನಗಳ ಅನಾವರಣ

0

 

 

ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘದ ಮಹಾಸಭೆ ಸೆ. 16ರಂದು ಪೂ. 10 ಗಂಟೆಯಿಂದ ನಡೆಯಲಿದ್ದು, ಈ ಸಂದರ್ಭದಲ್ಲಿ ಸಂಘದ ರೈತ ಬಜಾರ್ ಸುಪರ್ ಮಾರ್ಕೆಟ್ ನಲ್ಲಿ ಕೆ.ಎಂ.ಎಫ್. ಹಾಲಿನ ಉತ್ಪನ್ನಗಳ ಅನಾವರಣ ನಡೆಯಿತು.

ಸಂಘದ ಅಧ್ಯಕ್ಷ ಭವಾನಿಶಂಕರ ಪೂಂಬಾಡಿ ಉತ್ಪನ್ನಗಳನ್ನು ಅನಾವರಣಗೊಳಿಸಿದರು. ಸಂಘದ ಉಪಾಧ್ಯಕ್ಷ ಭರತ್ ನೆಕ್ರಾಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರತನ್ ಕೆ.ಆರ್. ನಿರ್ದೇಶಕರು, ಸಿಬ್ಬಂದಿಗಳು, ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಭರತ್ ನೆಕ್ರಾಜೆ ಉತ್ಪನ್ನದ ಬಗ್ಗೆ ಮಾಹಿತಿ ನೀಡಿ ಸ್ವಾಗತಿಸಿದರು.