ಇಂಡಿಯನ್ ಸ್ವಚ್ಚತಾ ಲೀಗ್ ಹೆಸರಿನಲ್ಲಿ ನ.ಪಂ.‌ವತಿಯಿಂದ ಸ್ವಚ್ಚತಾ ಅಭಿಯಾನ

0

 

 

ಇಂಡಿಯನ್ ಸ್ವಚ್ಚತಾ ಲೀಗ್ ಹೆಸರಿನಲ್ಲಿ ಸುಳ್ಯ ‌ನಗರ ಪಂಚಾಯತ್, ಅಮರ ಸುಳ್ಯ – ರಮಣೀಯ ಸುಳ್ಯ ತಂಡದ ಆಶ್ರಯದಲ್ಲಿ ನಗರ ಪಂಚಾಯತ್ ಕಚೇರಿ ಬಳಿಯಿಂದ ವಿವೇಕಾನಂದ ಸರ್ಕಲ್ ವರೆಗೆ ನಗರ ಸ್ವಚ್ಚತಾ ಕಾರ್ಯಕ್ರಮ ಸೆ. 17 ರಂದು ನಡೆಯಿತು.

ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಕುರುಂಜಿ, ಮುಖ್ಯಾಧಿಕಾರಿ ಸುಧಾಕರ್, ಆರೋಗ್ಯ ನಿರೀಕ್ಷಕಿ ಶ್ವೇತ ಕಿರಣ್ ಹಾಗೂ ಪಂಚಾಯತ್ ಸದಸ್ಯರು, ಸಿಬ್ಬಂದಿಗಳು, ಅಮರ ಸುಳ್ಯ ರಮಣೀಯ ಸುಳ್ಯ ತಂಡದ ಸದಸ್ಯರು ಇದ್ದರು.