ಬಿಳಿನೆಲೆಯಲ್ಲಿ ಕಡಬ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ

0

 

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಡಬ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನ.20ರಂದು ಬಿಳಿನೆಲೆಯಲ್ಲಿ ಕಡಬ ತಾಲೂಕು 3 ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರಗಲಿರುವುದು .

ಈ ಬಗ್ಗೆ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಸೆ.15ರಂದು ಪೂರ್ವಭಾವಿ ಸಭೆ ನಡೆಯಿತು . ಸಮ್ಮೇಳನದ ಸ್ವಾಗತ ಸಮಿತಿ ರಚಿಸಿ ಗೌರವಾಧ್ಯಕ್ಷರಾಗಿ ಶ್ರೀ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀಶ್ರೀ ವಿದ್ಯಾಪ್ರಸನ್ನ ತೀರ್ಥ ರನ್ನ ಆಯ್ಕೆ ಮಾಡಲಾಯಿತು. ಸಂಚಾಲಕರಾಗಿ ಶ್ರೀಕೃಷ್ಣ ಶರ್ಮ ಸುಬ್ರಹ್ಮಣ್ಯ, ಅಧ್ಯಕ್ಷರಾಗಿ ಜಯಪ್ರಕಾಶ್ ಮೋಂಟಡ್ಕ ಬಿಳಿನೆಲೆ, ಕಾರ್ಯಾಧ್ಯಕ್ಷರಾಗಿ ಸತೀಶ್ ಎರ್ಕ ಬಿಳಿನೆಲೆ , ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯಣ್ಣಗೌಡ ಅಮೈ, ಕೋಶಾಧ್ಯಕ್ಷರಾಗಿ ಶಾರದಾ ಕೇಶವ ಗೌಡ ಪುತ್ತಿಲ , ಕಾರ್ಯದರ್ಶಿಯಾಗಿ ವಿಜಯಕುಮಾರ ನಡುತೋಟ ಬಿಳಿನೆಲೆ ಕೈಕಂಬ , ಜತೆ ಕಾರ್ಯದರ್ಶಿಯಾಗಿ ಸರೋಜಿನಿ ಜಯಪ್ರಕಾಶ್ ಮೋಂಟಡ್ಕ , ಉಪಾಧ್ಯಕ್ಷರುಗಳು, ವಿವಿಧ ಸಮಿತಿಗಳ ಸಂಚಾಲಕರು ಹಾಗೂ ಸದಸ್ಯರುಗಳನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು .ವೇದಿಕೆಯಲ್ಲಿ ಕನ್ನಡ ಕಡಬ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೇಸಪ್ಪ ರೈ ,ನಿಕಟಪೂರ್ವ ಅಧ್ಯಕ್ಷ ಪಣೆಮಜಲು ಜನಾರ್ದನ ಗೌಡ ,ಬಿಳಿನೆಲೆ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಶಂಕರ್ , ಕೆ ನಾರಾಯಣ ಭಟ್ ರಾಮಕುಂಜ, ವಸಂತ್ ಕುಮಾರ್ ರಾವ್ ರಾಮಕುಂಜ, ಶ್ರೀ ಕೃಷ್ಣ ಶರ್ಮ ಸುಬ್ರಹ್ಮಣ್ಯ, ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು .