ಕಲಾಕಾವ್ಯ ನಾಟ್ಯ ಶಾಲಾ ವಿದ್ಯಾರ್ಥಿಗಳ ಭರತನಾಟ್ಯ ಗೆಜ್ಜೆಪೂಜೆ ಕಾರ್ಯಕ್ರಮ

0

 

ಮಡಿಕೇರಿಯ ಕಲಾಕಾವ್ಯ ನಾಟ್ಯ ಶಾಲಾ ವಿದ್ಯಾರ್ಥಿಗಳ ಗೆಜ್ಜೆ ಪೂಜೆ ಕಾರ್ಯಕ್ರಮವು ಸೆ.೧೮ರಂದು ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದ ಪುರೋಹಿತರು ಪೂಜಾ ವಿಧಿವಿಧಾನಗಳನ್ನು ನಡೆಸಿಕೊಟ್ಟರು.
ನಂತರ ನೃತ್ಯ ಶಿಕ್ಷಕಿ ವಿದೂಷಿ ಕಾವ್ಯಶ್ರೀ ಕಪಿಲ್‌ರವರಿಂದ ಸುಮಾರು 50 ಮಂದಿ ವಿದ್ಯಾರ್ಥಿಗಳಿಗೆ ಗೆಜ್ಜೆಪೂಜೆ ನೆರವೇರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಮೂಡಿಬಂತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಯರ ಪೋಷಕರು ಉಪಸ್ಥಿತರಿದ್ದರು.
ವಿದೂಷಿ ಕಾವ್ಯಶ್ರೀ ಕಪಿಲ್ ರವರು ನಾರಾಯಣ ಚಿದ್ಗಲ್ ರವರ ಪುತ್ರಿ.
ವಿವಾಹವಾದ ಬಳಿಕ ಕುಟುಂಬದೊಂದಿಗೆ ಮಡಿಕೇರಿ ನೆಲೆಸಿದ್ದಾರೆ.