ಗಾನ ಶಾರದೆ ಗಾಯನ ಸ್ಪರ್ಧೆಯ ಗ್ರಾಂಡ್ ಫಿನಾಲೆಯಲ್ಲಿ ಸುಳ್ಯದ ತನ್ಮಯ್ ಗೆ ದ್ವಿತೀಯ ಬಹುಮಾನ

0

ಉಪ್ಪಿನಂಗಡಿಯ ರಾಮನಗರ ಗಾಣಿಗ ಸಮುದಾಯ ಭವನದಲ್ಲಿ ಆರ್ ಪಿ ಕ್ರಿಯೇಷನ್ಸ್ ಪಾಂಬಾರು ಆಯೋಜಿಸಿದ್ದ ಗಾನ ಶಾರದೆ ಗಾಯನ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಸುಳ್ಯದ ತನ್ಮಯ್ ಎಮ್ ಸೋಮಯಾಗಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾನೆ .

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಪುತ್ತೂರಿನ ಶಾಸಕರಾದ ಸಂಜೀವ ಮಠ೦ದೂರುರವರು ವಹಿಸಿದ್ದರು . ಸುಳ್ಯದ ಖ್ಯಾತ ಸಾಹಿತಿ , ಗಾಯಕ ಮತ್ತು ಖ್ಯಾತ ಜ್ಯೋತಿಷಿ ಭೀಮರಾವ್ ವಾಸ್ಟರ್ ಅಭಿನಂದನಾ ಭಾಷಣ ಮಾಡಿ ಬಹುಮಾನ ನೀಡಿ ಗೌರವಿಸಿದರು . ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಆರ್ ಪಿ ಕ್ರಿಯೇಷನ್ ಅಧ್ಯಕ್ಷ ರವಿ ಪಾಂಬಾರ್ , ದಿಲೀಪ್ ಸುಳ್ಯ , ಖ್ಯಾತ ಗಾಯಕರಾದ ಮಿಥುನ್ ರಾಜ್ ವಿದ್ಯಾಪುರ , ಚಂದ್ರಶೇಖರ್ ಪುತ್ತೂರು , ಶಿವಾನಂದ್ ಶೆಣೈ , ಹರ್ಷಿತಾ ಸುಳ್ಯ , ಪದ್ಮರಾಜ್ ವಿಟ್ಲ ಇನ್ನಿತರರು ಉಪಸ್ಥಿತರಿದ್ದರು . ತನ್ಮಯ್ ಸಂತ ಜೋಸೆಫ್ ಶಾಲೆಯಲ್ಲಿ 6 ನೇ ತರಗತಿಯಲ್ಲಿ ಓದುತ್ತಿದ್ದಾನೆ . ಮುಳ್ಯ ಅಟ್ಲೂರಿನಲ್ಲಿ ವಾಸವಾಗಿರುವ ಶ್ರೀಮತಿ ರಂಜಿನಿ ಮತ್ತು ವಿಕ್ರಮ್ ಸೋಮಯಾಗಿಯವರ  ಪುತ್ರ.