ಸುಳ್ಯ: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ಸಹಜ ಸಮಾಧಿ ಧ್ಯಾನ ಶಿಬಿರ

0

 

ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸುಳ್ಯ ಶಾಖಾ ವತಿಯಿಂದ ಮೂರು ದಿನಗಳ ಸಹಜ ಸಮಾಧಿ ಧ್ಯಾನ ಶಿಬಿರವು ಶಿವಕೃಪಾ ಕಲಾಮಂದಿರ ದಲ್ಲಿ ಸೆ.16, 17ಮತ್ತು 18 ರಂದು ನಡೆಯಿತು.
ಶಿಬಿರದಲ್ಲಿ ಒತ್ತಡ ರಹಿತ ಶಾಂತವಾದ ಮನಸ್ಸು, ಸಂತೋಷ, ಉತ್ಸಾಹ, ಕ್ರಿಯಾಶೀಲ ಆರೋಗ್ಯಕರ ವಾದ ಬದುಕು ನಡೆಸಲು ಧ್ಯಾನ ಹೇಗೆ ಅವಶ್ಯ ಎಂದು ತಿಳಿಸಲಾಯಿತು.
ಖಿನ್ನತೆ, ಚಿಂತೆ, ಅತಂಕಗಳಿಂದ ಮುಕ್ತಿ ಹೊಂದಿ, ಭಾವನೆಗಳಲ್ಲಿ ಉಂಟಾಗುವ ಏರುಪೇರುಗಳ ನಿರ್ವಹಣೆ ಬಗ್ಗೆ ತರಬೇತುದಾರ ರಾದ ದೀಪಿಕಾ ಜಿ.ರವರು ವಿವರಿಸಿದರು. ಧ್ಯಾನಶಿಬಿರವನ್ನು ದೇಶದ ಹಲವು ಕಡೆ ಏಕ ಕಾಲದಲ್ಲಿ ಆಯೋಜಿಸಲಾಗಿತ್ತು. ಸುಳ್ಯ ಕೇಂದ್ರದ ಶಿಕ್ಷಕ ರಾಮಕೃಷ್ಣ ಭಟ್ ಶಿಬಿರವನ್ನು ಆಯೋಜಿಸಿದರು. ಮತ್ತು ಆರ್ಟ್ ಓಫ್ ಲಿವಿಂಗ್ ಜಿಲ್ಲಾ ಅಭಿವೃದ್ಧಿ ಸಮಿತಿ ಸದಸ್ಯೆ ಶ್ರೀಮತಿ ಉಷಾ ಕಾನತ್ತಿಲ ರವರು ಸಹಕರಿಸಿದರು.