ಕೊಲ್ಲಮೊಗ್ರು- ಕಡಂಬಳ ತಾತ್ಕಾಲಿಕ ಸೇತುವೆ ಕೆಲಸ ಆರಂಭ

0

 

ಸಚಿವ ಎಸ್. ಅಂಗಾರ ಸೂಚನೆ

ಆಗಸ್ಟ್ ಆರಂಭದ ಭೀಕರ ಮಳೆ ಹಾಗೂ ಪ್ರವಾಹಕ್ಕೆ ಕೊಚ್ಚಿ ಹೊಗಿದ್ದ ಕೊಲ್ಲಮೊಗ್ರು ಕಡಂಬಳ ಸಂಪರ್ಕ ಸೇತುವೆಯನ್ನು ಸಚಿವ ಎಸ್. ಅಂಗಾರರವರ ಸೂಚನೆ ಮೇರೆಗೆ ಸೆ.೨೨ ರಂದು ಕೆಲಸ ಆರಂಭಗೊಂಡಿದೆ.

ಪ್ರವಾಹ ಬಂದು ಹಲವು ದಿನ ಕಳೆದರೂ ಕೆಲಸ ವಿಳಂಬವಾಗುತ್ತಿರುವ ಬಗ್ಗೆ ಸಚಿವರಿಗೆ ದೂರು ಹೋದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸಿಮೆಂಟ್ ಪೈಪ್ ಹಾಕಿ ವಾಹನ ಸಂಚಾರಕ್ಕೆ ರಸ್ತೆ ನಿರ್ಮಿಸಲು ಸಚಿವರು ಸೂಚನೆ ನೀಡಿದ್ದರಿಂದ ಮೋರಿ ಹಾಕಿ ತಾತ್ಕಾಲಿಕವಾಗಿ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡುತ್ತಿದ್ದು, ಗುತ್ತಿಗೆದಾರ ರಾಧಾಕೃಷ್ಣ ಕಟ್ಟೆಮನೆ ಅವರು ಕೆಲಸ ಕೈ ಗೆತ್ತಿಕೊಂಡಿರುವುದಾಗಿ ತಿಳಿದುಬಂದಿದೆ.