ಬಿಜೆಪಿ ಯುವ ಮೋರ್ಚಾದ ಬೆಳ್ಳಾರೆ ಮಹಾಶಕ್ತಿ ಕೇಂದ್ರದ ವತಿಯಿಂದ ಜಲದುರ್ಗಾದೇವಿ ದೇವಾಲಯದಲ್ಲಿ ಕೆರೆ ಸ್ವಚ್ಛತೆ

0

ಬಿಜೆಪಿ ಯುವಮೋರ್ಚಾ, ಸುಳ್ಯ ಮಂಡಲದ ಬೆಳ್ಳಾರೆ ಮಹಾಶಕ್ತಿ ಕೇಂದ್ರದ ವತಿಯಿಂದ ಸೇವಾ ಪಾಕ್ಷಿಕದ ಅಂಗವಾಗಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜಯಂತಿಯ ಪ್ರಯುಕ್ತ ಸೆ.25ರಂದು ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಕೆರೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.


ಸ್ವಚ್ಛತಾ ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮೋರ್ಚಾದ ಸುಳ್ಯ ಮಂಡಲದ ಅಧ್ಯಕ್ಷರಾದ ಶ್ರೀಕೃಷ್ಣ ಎಂ.ಆರ್, ಯುವ ಮೋರ್ಚಾದ ಬೆಳ್ಳಾರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹರ್ಷಿತ್ ಕುಮಾರ್, ಬಿಜೆಪಿ ಪೆರುವಾಜೆ ಬೂತ್ ನ ಅಧ್ಯಕ್ಷರಾದ ರಮೇಶ್ ಮಟ್ಟತಡ್ಕ,ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ,ಸದಸ್ಯ ಜಯಪ್ರಕಾಶ್.ರೈ ಪೆರುವಾಜೆ,ಬಿಜೆಪಿ ಯುವಮೋರ್ಚಾದ ಕಾರ್ಯಕರ್ತರಾದ ಸುಜಿತ್ ಆಚಾರ್ಯ,ಅಕ್ಷಯ್ ಪೆರುವಾಜೆ,ಚೇತನ್ ವಲಳಂಬೆ,ಪುರುಷೋತ್ತಮ ಮಠತ್ತಡ್ಕ,ವಾಸುದೇವ ಪೆರುವಾಜೆ,ಪುರುಷೋತ್ತಮ ಪೆರುವಾಜೆ,ಧರ್ಮಪಾಲ.ಟಿ,ಶಿವಕುಮಾರ್.ರೈ ಮತ್ತಿತರರು ಭಾಗವಹಿಸಿದ್ದರು.