ಸುಳ್ಯ ಕಸಬಾದ ಕುರುಂಜಿಭಾಗ್ ನಿವಾಸಿ ತಾಲೂಕು ಕಚೇರಿ ನಿವೃತ್ತ ಉದ್ಯೋಗಿ ಶಂಕರ ನಾಯ್ಕ್ ರವರು ಅಲ್ಪ ಕಾಲದ ಅಸಂಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೆ.26 ರಂದು ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.
ಮೃತರು ಮೂವರು ಪುತ್ರಿಯರಾದ ಸಿಂಧೂ, ಬಿಂದು, ಪೂಜಾ ಹಾಗೂ ಅಳಿಯಂದಿರನ್ನು, ಸಹೋದರ, ಸಹೋದರಿಯರನ್ನು, ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಸುಳ್ಯ ತಾಲೂಕು ಕಚೇರಿಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ್ದರು. ಪರಿವಾರ ಬಂಟ ಸಮಾಜ ಸಂಘದ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.