ಮೌಂಟ್ ಅಬುವಿನಲ್ಲಿ ನಡೆದ ರಾಷ್ಟ್ರೀಯ ಕೃಷಿ ಸಮ್ಮೇಳನದಲ್ಲಿ ಸುಳ್ಯ ಬ್ರಹ್ಮಕುಮಾರೀಸ್ ಧ್ಯಾನ ಕೇಂದ್ರದ ಸದಸ್ಯರು ಭಾಗಿ

0

ಬ್ರಹ್ಮಕುಮಾರೀಸ್ ಸಂಸ್ಥೆಯ ಮುಖ್ಯಕೇಂದ್ರ ಮೌಂಟ್ ಅಬುವಿನಲ್ಲಿ ಧ್ಯಾನದಿಂದ ಕೃಷಿ ವಿಶ್ವಕ್ಕೆ ಆಧಾರ ಸ್ತಂಭ ‘ ಎಂಬ ವಿಷಯದಲ್ಲಿ ನಡೆದ ರಾಷ್ಟ್ರೀಯ ಕೃಷಿ ಸಮ್ಮೇಳನದಲ್ಲಿ ಸುಳ್ಯದ ಬ್ರಹ್ಮಕುಮಾರೀಸ್ ಯೋಗ ಧ್ಯಾನ ಕೇಂದ್ರ ದಿಂದ ಸುಮಾರು 20 ಮಂದಿ ಹಿರಿಯ ಕಿರಿಯ ಸದಸ್ಯರು ಭಾಗವಹಿಸಿರುತ್ತಾರೆ.


ಸುಳ್ಯ ಬ್ರಹ್ಮಕುಮಾರೀಸ್ ಧ್ಯಾನ ಕೇಂದ್ರದ ಉಮಾ ರವರು ಪ್ರವಾಸದ ನೇತೃತ್ವ ವಹಿಸಿದ್ದರು. ಅಹಮದಾಬಾದ್ ಸೌರಾಷ್ಟ್ರ , ಸೋಮನಾಥ ದರ್ಶನ , ಪೋರಬಂದರ್ , ದ್ವಾರಕಾ , ಬರೋಡ ಸರ್ದಾರ್ ವಲ್ಲಭಭಾಯ್ ಪ್ರತಿಮೆ , ಅಕ್ಷರಧಾಮ , ಸಾಬರ್ಮತಿ , ಮೌಂಟ್ ಅಬು ಬ್ರಹ್ಮಾಕುಮಾರಿ ಮುಖ್ಯಕೇಂದ್ರದಲ್ಲಿ ಮೂರುದಿನದ ಸಮ್ಮೇಳನದಲ್ಲಿ ಇವರುಗಳು ಭಾಗವಹಿಸಿ ಸೆ. 24 ಕ್ಕೆ ಮತ್ತೆ ಸುಳ್ಯಕ್ಕೆ ಹಿಂತಿರುಗಿರುತ್ತಾರೆ.