ಎಚ್. ಭೀಮರಾವ್ ವಾಷ್ಠರ್ ರವರು ಅಮರ ಜ್ಞಾನ ಪಂಡಿತಶ್ರೀ ರಾಜ್ಯ ಪ್ರಶಸ್ತಿಗೆ ಆಯ್ಕೆ

0

ಸುಳ್ಯದ ಖ್ಯಾತ ಜ್ಯೋತಿಷಿ , ಸಾಹಿತಿ , ಚಿತ್ರನಿರ್ದೇಶಕ , ಗಾಯಕ , ಚಿತ್ರನಟ , ಸಂಘಟಕರಾದ ಎಚ್ .ಭೀಮರಾವ್ ವಾಷ್ಠರ್ ಕೋಡಿಹಾಳರವರು ಅಮರ ಜ್ಞಾನ ಪಂಡಿತಶ್ರೀ ರಾಜ್ಯಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ . 6-10-2022 ರಂದು ರಾಯಚೂರು ಜಿಲ್ಲೆಯ ನಾಗರಹಾಳ ಹಜರತ್ ದಾವಲಮಲಿಕ್ ಉರುಸ್ ಜಾತ್ರೆಯ ಪ್ರಯುಕ್ತ ನಡೆಯುವ ಸರ್ವಧರ್ಮ ಭಾವೈಕ್ಯ ಮಹಾ ಸಮ್ಮೇಳನದಲ್ಲಿ ಶಾಸಕರ , ಶಿವಶರಣರ , ಮಠಾಧಿಪತಿಗಳ ಗಣ್ಯ ಸಮಕ್ಷಮದಲ್ಲಿ ಭೀಮರಾವ್ ವಾಷ್ಠರ್ ಅವರಿಗೆ ರಾಜ್ಯಪ್ರಶಸ್ತಿ ನೀಡಿ ಗೌರವಿಸಲಾಗುವದು ಎಂದು ಸರ್ವಧರ್ಮ ಭಾವೈಕ್ಯ ಸಂಗಮ ವೇದಿಕೆ ನಾಗರಹಾಳ ಇದರ ಸಂಚಾಲಕರಾದ ಶ್ರೀ ನಿರುಪಾದಿ ಕವಿಗಳು ತಿಳಿಸಿದ್ದಾರೆ .