ಚೊಕ್ಕಾಡಿ – ಅಮ್ಮಾಜಿಕಲ್ಲು ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ

0

 

ಸುಳ್ಯ ಎಪಿಎಂಸಿಯ ನಿಕಟಪೂರ್ವ ಅಧ್ಯಕ್ಷರಾದ ವಿನಯಕುಮಾರ್ ಮುಳುಗಾಡು ಇವರ ಅನುದಾನ ರೂ.2.50ಲಕ್ಷ ದ ಕಾಮಗಾರಿ ದೇವಚಳ್ಳ ಗ್ರಾಮದ ಚೊಕ್ಕಾಡಿ – ಅಮ್ಮಾಚಿಕಲ್ಲು ಇಲ್ಲಿ ನಡೆಯಲಿದ್ದು ಗುಡ್ಡಲಿಪೂಜೆ ಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸುಳ್ಯ ಎಪಿಎಂಸಿ ಇತಿಹಾಸದಲ್ಲಿ ಇಷ್ಟೊಂದು ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿ ಆಗಿರುವುದಿಲ್ಲ ಅತ್ಯಂತ ಹೆಚ್ಚು ಅನುದಾನವನ್ನು ತರಿಸುವಲ್ಲಿ ಸಚಿವರಾದ ಅಂಗಾರರವರು ಮಂಡಲ ಅಧ್ಯಕ್ಷ ನೇತೃತ್ವದ ಮಂಡಲ ಬಿಜೆಪಿ ಪ್ರಮುಖರ ಸಹಕಾರದಿಂದ ಆಗಿದೆ ಎಂದು ವಿನಯಕುಮಾರ್ ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮಪಂಚಾಯತ್ ಸದಸ್ಯರಾದ ಭವಾನಿಶಂಕರ ಮುಂಡೋಡಿ,ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿವಾಕರ ಮುಂಡೋಡಿ,ಬೂತ್ ಕಾರ್ಯದರ್ಶಿ ಪ್ರೀತಮ್ ಮುಂದೋಡಿ,ರಾಜೀವ ವಾಲ್ತಾಜೆ, ರಾಕೇಶರಾಜ್ ಹಿರಿಯಡ್ಕ,ಭಾಲಕೃಷ್ಣ ಮಡಪ್ಪಾಡಿ,ರಾಜಶೇಖರ ಮಡಪ್ಪಾಡಿ,ಮೀನಾಕ್ಷಿ ಉಮೇಶ್ ಮುಂಡೋಡಿ ಮತ್ತಿತರ ಸಾರ್ವಜನಿಕರು ಉಪಸ್ಥಿತರಿದ್ದರು.