ಅ.5:ಪಂಜದಲ್ಲಿ ಶ್ರೀ ಶಾರದೋತ್ಸವ

0

ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ , ಶ್ರೀ ಶಾರದೋತ್ಸವ ಸಮಿತಿ 2022 ಅ.5.ರಂದು ವಿವಿಧ ವೈಧಿಕ,ಧಾರ್ಮಿಕ,ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಪೂರ್ವಾಹ್ನ ಗಂಟೆ 9.03ಕ್ಕೆ ಪ್ರತಿಷ್ಠೆ , ಭಜನಾ ಸಂಕೀರ್ತನೆ , ಮಕ್ಕಳಿಗೆ ಅಕ್ಷರಾಭ್ಯಾಸ , ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ಜರುಗಲಿದೆ. ಪೂರ್ವಾಹ್ನ 9.30ಕ್ಕೆ ಕ್ರೀಡಾ- ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ ನಡೆಯಲಿದೆ. ಸಾಂಸ್ಕೃತಿಕ ಸ್ಪರ್ಧೆಯನ್ನು ವಲಯಾರಣ್ಯಾಧಿಕಾರಿ ಮಂಜುನಾಥ್ ಯನ್ ರವರು ಉದ್ಘಾಟಿಸಲಿದ್ದಾರೆ. ಕ್ರೀಡಾ ಸ್ಪರ್ಧೆಯನ್ನು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ತುಕಾರಾಮ ಏನೆಕಲ್ಲು ಉದ್ಘಾಟಿಸಲಿದ್ದಾರೆ.
ಪೂರ್ವಾಹ್ನ ಗಂಟೆ 11ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಲೋಕೇಶ್ ಬರಮೇಲು ಸಭಾಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಅಧ್ಯಾಪಕ ನಾರಾಯಣ ಭಟ್ ಟಿ ರಾಮಕುಂಜ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಪಾಲ್ಗೊಳ್ಳಲಿದ್ದಾರೆ.ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪಂಜ ಸರಕಾರಿ ಪದವಿ ಪೂರ್ವ ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್ಲು ಮತ್ತು ಚಲನಚಿತ್ರ ಮತ್ತು ಧಾರಾವಾಹಿ ನಟನೆ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕು.ಪೂಜಾ ಲಕ್ಷ್ಮಣ ಬೇರ್ಯ ರವರನ್ನು ಸನ್ಮಾನಿಸಲಾಗುವುದು.ಪಂಜ ಕ್ಲಸ್ಟರಿನ 9 ಶಾಲೆಗಳ ಆಯ್ದು 9 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶ್ರೀ ಶಾರದಾಂಬಾ ಭಜನಾ ಮಂಡಳಿ ವತಿಯಿಂದ ಪ್ರತಿಭಾ ಪುರಸ್ಕಾರ ಜರಗಲಿದೆ.
ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು: ಮುಂಜಾನೆ 8 ಗಂಟೆಗೆ
ಗುಡ್ಡಗಾಡು ಓಟ 17ವರುಷ ಒಳಗಿನ (ಬಾಲಕ-ಬಾಲಕಿಯರಿಗೆ),,18-49 ವರುಷ ಒಳಗಿನ (ಪುರುಷರಿಗೆ -ಮಹಿಳೆಯರಿಗೆ),50 ವರುಷ ಮೇಲ್ಪಟ್ಟ ಪುರುಷ ಹಿರಿಯರಿಗೆ ನಡೆಯಲಿದೆ. ಭಕ್ತಿ ಗೀತೆ ಮತ್ತು ರಸಪ್ರಶ್ನೆ ಸ್ಪರ್ಧೆಗಳು ಕಿರಿಯ ,ಹಿರಿಯ, ಪ್ರೌಢ, ಸಾರ್ವಜನಿಕ ವಿಭಾಗದಲ್ಲಿ ಜರುಗಲಿದೆ. ರಂಗೋಲಿ ಸ್ಪರ್ಧೆ ಕಿರಿಯ, ಪ್ರೌಢ , ಸಾರ್ವಜನಿಕ ವಿಭಾಗದಲ್ಲಿ ಜರುಗಲಿದೆ. ಚಿತ್ರಕಲಾ ಸ್ಪರ್ಧೆ ಎಲ್ ಕೆ ಜಿ, ಯು ಕೆ ಜಿ ,1,2 ತರಗತಿ ಮಕ್ಕಳಿಗೆ ಐಚ್ಚಿಕ ಚಿತ್ರ, 2ರಿಂದ 4ನೇ ತರಗತಿ ಮಕ್ಕಳಿಗೆ ಸ್ವಚ್ಛ ಪರಿಸರ, 5 ರಿಂದ 7ನೇ ತರಗತಿ ಮಕ್ಕಳಿಗೆ ಶಾರದೆ, 8ರಿಂದ 10 ನೇ ತರಗತಿ ಮಕ್ಕಳಿಗೆ ಜಾನಪದ ಕಲೆಗಳು ವಿಷಯದಲ್ಲಿ ಸ್ಪರ್ಧೆಗಳು ಜರುಗಲಿದೆ.ಎಲ್.ಕೆ.ಜಿ, ಯು.ಕೆ.ಜಿ, ಅಂಗನವಾಡಿ ಮಕ್ಕಳಿಗೆ ಕಾಳು ಹೆಕ್ಕುವುದು, ಕಪ್ಪೆಜಿಗಿತ ನಡೆಯಲಿದೆ.

55ಕೆ.ಜಿ. ವಿಭಾಗದ ಪುರುಷರ ಕಬಡ್ಡಿ ಪಂದ್ಯಾಟ ಪ್ರಥಮ ರೂ.3000 ಮತ್ತು ಟ್ರೋಪಿ, ದ್ವಿತೀಯ ರೂ.2000 ಮತ್ತು ಟ್ರೋಪಿ,ಹಗ್ಗ‌ಜಗ್ಗಾಟ ಪ್ರಥಮ ರೂ.1500, ದ್ವಿತೀಯ ರೂ.1000 ನಗದು ಬಹುಮಾನವಿರುತ್ತದೆ.
ಸಾಂಸ್ಕೃತಿಕ ಸಂಭ್ರಮ: ಮಧ್ಯಾಹ್ನ 1.30 ರಿಂದ ಸವ್ಯ ಸಾಚಿ ಸುಭಾಷ್ ಪಂಜ ರವರ ನಿರ್ದೇಶನದಲ್ಲಿ ಶಾರದಾಂಬಾ ಕಲಾ ತಂಡ ಪ್ರಸ್ತುತಿಯ (ಐತಿಹಾಸಿಕ ಘಟನೆಗಳ ಅನಾವರಣ)ಹೊಸಕೆರೆ ಹೊನ್ನಮ್ಮ ಎಂಬ ನಾಟಕ, ವಿಶ್ವ ಕಲಾನಿಕೇತನ ಕಲ್ಚರಲ್ ಮತ್ತು ಆರ್ಟ್ಸ್ ಪುತ್ತೂರು ಇದರ ಪಂಜ ಶಾಖೆಯ ವಿದ್ಯಾರ್ಥಿಗಳಿಂದ ಭರತ ನಾಟ್ಯ ಪ್ರದರ್ಶನ ಗೊಳ್ಳಲಿದೆ.
ವೈಭವದ ಶೋಭಾಯಾತ್ರೆ:
ಸಂಜೆ ಶ್ರೀ ಶಾರದಾ ಮಾತೆಯ ವೈಭವದ ಶೋಭಾಯಾತ್ರೆ -ಜಲಸ್ತಂಭನದಲ್ಲಿ ಕುಣಿತ ಭಜನೆ, ಭಜನೆ, ಹುಲಿವೇಷ, ಟ್ಯಾಬ್ಲೊ, ಚೆಂಡೆ ವಾದನ,ಕೋಲಾಟ, ವಿಶೇಷ ಆಕರ್ಷಣೆಯಾಗಲಿದೆ.