ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

0

 

ಮಹಾತ್ಮಗಾಂಧೀಜಿ ಯವರ ಜೀವನವೇ ಸಂದೇಶ ಅದು ಇಂದಿಗೂ ಪ್ರಸ್ತುತ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ್ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಗಾಂಧಿಜಯಂತಿ ಆಚರಿಸಿ ಮಾತನಾಡಿದ ಅವರು ಲಾಲ್ ಬಹದ್ದೂರ್ ಶಾಸ್ತ್ರಿ ಯವರು ಮೌನ ಕ್ರಾಂತಿಯ ಮೂಲಕ ದೇಶಕ್ಕೆಉತ್ತಮ ಮೇಲ್ಪoಕ್ತಿ ಹಾಕಿಕೊಟ್ಟವರು ಇಬ್ಬರ ಜನ್ಮದಿನಾಚರಣೆ ಒಂದೇ ದಿನ ಆಚರಿಸುವಂತಾಗಿರುವುದು ಮುಂದಿನ ಪೀಳಿಗೆಗೆ ತಲುಪಿಸಲು ಸಹಕಾರಿ ಎಂದರು.
ಡಿ ಸಿ ಸಿ ಉಪಾಧ್ಯಕ್ಷ ಎನ್ ಜಯಪ್ರಕಾಶ್ ರೈ, ನಗರ ಪಂಚಾಯತ್ ಸದಸ್ಯ ಭಾಲಕೃಷ್ಣ ಭಟ್ ಕೋಡಂಕೇರಿ, ಇಂಟಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಎನ್ ಎಸ್ ಯು ಐ ಅಧ್ಯಕ್ಷ ಕೀರ್ತನ್ ಕೊಡೆಪಾಲ, ಕಿಸಾನ್ ಘಟಕ ಅಧ್ಯಕ್ಷ ಸುರೇಶ್ ಅಮೈ, ಬೆಳ್ಳಾರೆ ಸಹಕಾರಿ ಸಂಘದ ಅಧ್ಯಕ್ಷ ಅನಿಲ್ ರೈ ಬೆಳ್ಳಾರೆ, ಅಲ್ಪಸಂಖ್ಯಾತರ ಘಟಕ ವಲಯಾಧ್ಯಕ್ಷ ರಹೀಮ್ ಬೀಜದಕಟ್ಟೆ, ಉಬೈಸ್ ಗೂನಡ್ಕ, ಗಂಗಾಧರ ಮೇನಾಲ, ತೋಡಿಕಾನ ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಪೂಜಾರಿ, ಕಿಸಾನ್ ಘಟಕ ಅಧ್ಯಕ್ಷ ಅಶೋಕ್ ಚೂಂತಾರು ಉಪಸ್ಥಿತರಿದ್ದರು.
ಬ್ಲಾಕ್ ಕಾರ್ಯದರ್ಶಿ ಪಿ ಎಸ್ ಗಂಗಾಧರ್ ಸ್ವಾಗತಿಸಿ ಕೆ ಎಂ ಮುಸ್ತಫ ವಂದಿಸಿದರು.