ಉಬರಡ್ಕ: ಮರಣ ಸಾಂತ್ವನ ಧನ ಸಹಾಯ ವಿತರಣೆ

0

 

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದು ನಿಧನರಾದ ಶ್ರೀ ರಾಘವ ನಾಯ್ಕ
ಭರ್ಜರಿಗುಂಡಿ, ಇವರಿಗೆ, ಮರಣ ಸಾಂತ್ವನ ನಿಧಿ ರೂ 8000 ವನ್ನು ಮೃತರ ಪತ್ನಿ ಶ್ರೀಮತಿ ಜಯಂತಿ ರವರಿಗೆ, ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ದಾಮೋದರ ಗೌಡ ಮದುವೆಗದ್ದೆ ವಿತರಿಸಿ, ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಹರಿಪ್ರಸಾದ ಪಾನತ್ತಿಲ, ಜಗದೀಶ ಕಕ್ಕೆಬೆಟ್ಟು, ಈಶ್ವರ ಕಲ್ಚಾರು, ಪಂಚಾಯತ್ ಉಪಾಧ್ಯಕ್ಷರಾದ ಪ್ರಶಾಂತ್ ಪಾನತ್ತಿಲ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶ್ರೀ ಶಶಿಧರ ನಾಯರ್, ಶ್ಯಾಮ್ ಪಾನತ್ತಿಲ, ರಾಮಕೃಷ್ಣ ನಾಯ್ಕ ಕಕ್ಕೆಬೆಟ್ಟು, ಗುಡ್ಡಪ್ಪ ಕೆದಂಬಾಡಿ, ಪೂರ್ಣಚಂದ್ರ ಭರ್ಜರಿ ಗುಂಡಿ ಮುಂತಾದವರು ಉಪಸ್ಥಿತರಿದ್ದರು.