ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ದುರ್ಗಾಪೂಜೆ ಮತ್ತು ಆಯುಧಪೂಜೆ

0

 

ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ದುರ್ಗಾಪೂಜೆ,ಆಯುಧಪೂಜೆ ಮತ್ತು ತೆನೆಹಬ್ಬ ಇಂದು ನಡೆಯಿತು.

ಬೆಳಿಗ್ಗೆ ದುರ್ಗಾಪೂಜೆ ಆರಂಭಗೊಂಡು ಬಳಿಕ ಆಯುಧಪೂಜೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ತೆನೆಹಬ್ಬದೊಂದಿಗೆ ಹೊಸ ಅಕ್ಕಿ ಊಟ ನಡೆಯಿತು.
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ರಾಘವೇಂದ್ರ ಭಟ್ ಕಲ್ದಂಬೆ, ಅಧ್ಯಕ್ಷ ಸುಂದರ ರಾವ್,ಗೌರವಾಧ್ಯಕ್ಷ ದಯಾನಂದ ಸಾಲಿಯಾನ್ ಮೂಡೆಕಲ್ಲು, ಕಾರ್ಯದರ್ಶಿ ಕುಶಾಲಪ್ಪ ಗೌಡ ಕಜೆ, ಯತೀಶ್ ರೈ ದುಗ್ಗಲಡ್ಕ, ನ.ಪಂ.ಸದಸ್ಯ ಬಾಲಕೃಷ್ಣ ರೈ ದುಗ್ಗಲಡ್ಕ, ಮಾಜಿ ಅಧ್ಯಕ್ಷೆ ಶೀಲಾವತಿ ಮಾಧವ, ದಿನೇಶ್ ಡಿ.ಕೆ. ಮೊದಲಾದವರು ಹಾಗೂ ಊರವರು ಉಪಸ್ಥಿತರಿದ್ದರು.