ತೊಡಿಕಾನ : ಸಿಡಿಲು ಬಡಿದು ಹಾನಿ

0

 

 

ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಮುಪ್ಪಸೇರು ಗುರುಶಾಂತ್ ಅವರ ಮನೆಗೆ ಸಿಡಿಲು‌ ಬಡಿದು ಹಾನಿ ಉಂಟಾದ ಬಗ್ಗೆ ವರದಿಯಾಗಿ‌ದೆ.

ಸಿಡಿಲು‌ ಬಡಿದ ರಭಸಕ್ಕೆ‌ಗೋಡೆ ಬಿರುಕು‌ ಬಿಟ್ಟಿದೆ.ವಿದ್ಯುತ್ ಸಂಪರ್ಕದ ವಯರಿಂಗ್ ಸುಟ್ಟು ಹೋಗಿದೆ.ಸೋಲಾರ್ ವಿದ್ಯುತ್ ದೀಪಗಳ ಸಂಪರ್ಕ ಕಡಿತಗೊಂಡಿದೆ.ಅರಂತೋಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಹಾಗೂ ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಪೂಜಾರಿ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.