ಕಾರು-ಸ್ಕೂಟಿ ಅಪಘಾತದಲ್ಲಿ ಅಣ್ಣ-ತಂಗಿ ಮೃತ್ಯು

0

 

ಆಸ್ಪತ್ರೆಗೆ ಸಚಿವ ಅಂಗಾರ ಭೇಟಿ

ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಎಲಿಮಲೆ ಸಮೀಪದ ‌ಜಬಳೆಯಲ್ಲಿ ಸ್ಕೂಟಿ ಮತ್ತು ಕಾರು ಅಪಘಾತದಲ್ಲಿ ಬಾಜಿನಡ್ಕದ ನಿಶಾಂತ್ ಹಾಗೂ ತಂಗಿ ಮೋಕ್ಷಾ ಮೃತಪಟ್ಟ ವಿಷಯ ತಿಳಿದು ಸಚಿವ ಎಸ್.ಅಂಗಾರ ಸುಳ್ಯ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದರು. ಅಣ್ಣ ತಂಗಿ ಅಪಘಾತದಲ್ಲಿ ಮೃತಪಟ್ಟಿರುವುದಕ್ಕೆ ಸಚಿವರು ತೀವ್ರ ಸಂತಾಪ ಸೂಚಿಸಿದರು. ಮೃತದೇಹದ ಪೋಸ್ಟ್ ಮಾರ್ಟಂ ಮತ್ತಿತರ ಕಾನೂನು ಕ್ರಮಗಳನ್ನು ಕೂಡಲೇ ಪೂರ್ತಿ ಮಾಡಲು ಅವರು ಅಧಿಕಾರಿಗಳಿಗೆ ಸೂಚಿಸಿದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಸುನಿಲ್ ಕೇರ್ಪಳ, ನಿಕೇಶ್ ಉಬರಡ್ಕ ಮತ್ತಿತರರು ಸಚಿವರ ಜೊತೆಯಲ್ಲಿದ್ದರು.

LEAVE A REPLY

Please enter your comment!
Please enter your name here