ಮೂಡಬಿದಿರೆಯ ಶ್ರೀ ವೀರಮಾರುತಿ ಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ಅ.2ರಂದು ಜರುಗಿದ ದ.ಕ. ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯ ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಹಂಶಿತ್ ಅಡ್ಕಾರು ಅವರು ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಯೋಗಶಿಕ್ಷಕರಾದ ಸಂತೋಷ್ ಮುಂಡೋಕಜೆ ಮತ್ತು ಶ್ರೀಮತಿ ಪ್ರಶ್ವಿಜ ಸಂತೋಷ್ ಅವರು ಯೋಗ ತರಬೇತಿ ನೀಡಿದ್ದಾರೆ. ಈತ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದು, ಜಾಲ್ಸೂರು ಗ್ರಾಮದ ಅಡ್ಕಾರಿನ ಶರತ್ ಅಡ್ಕಾರು ಹಾಗೂ ಶ್ರೀಮತಿ ಶೋಭಾ ಶರತ್ ದಂಪತಿಗಳ ಪುತ್ರ.