ಸದಾಸ್ಮಿತ ಫೌಂಡೇಶನ್ ವತಿಯಿಂದ ಪಂಜಿಕಲ್ಲು ಶಾಲೆಗೆ ಪೀಠೋಪಕರಣಗಳ ಹಸ್ತಾಂತರ

0

 

 

ಕಲಿತ ಶಾಲೆಗೆ ಡಿ.ವಿ.ಎಸ್. ರಿಂದ ಕೊಡುಗೆ

ತಾನು ಪ್ರಾಥಮಿಕ ವಿದ್ಯಾಭ್ಯಾಸ ಕಲಿತ ಮಂಡೆಕೋಲು ಸಮೀಪದ ಪಂಜಿಕಲ್ಲು ಎಸ್.ವಿ.ಎ.ಯು.ಪಿ. ಶಾಲೆಗೆ ಅಗತ್ಯವಿದ್ದ ಪೀಠೋಪಕರಣಗಳನ್ನು ಮಾಜಿ ಮುಖ್ಯಮಂತ್ರಿ, ಸಂಸದರೂ ಆಗಿರುವ ಡಿ.ವಿ.ಸದಾನಂದ ಗೌಡರು ಸದಾಸ್ಮಿತ ಫೌಂಡೇಶನ್ ಮೂಲಕ ತನ್ನ ತಂದೆ ಹಾಗೂ ತಾಯಿಯ ಹೆಸರಿನಲ್ಲಿ ಕೊಡುಗೆಯಾಗಿ ನೀಡಿದ್ದಾರೆ.

ಅ.11 ರಂದು ಸದಾಸ್ಮಿತ ಫೌಂಡೇಶನ್ ಅಧ್ಯಕ್ಷರಾಗಿರುವ, ಡಿ.ವಿ.ಸದಾನಂದ ಗೌಡರ ಪುತ್ರ ಕಾರ್ತಿಕ್ ಡಿ.ಎಸ್. ರವರು ಬಂದು ಶಾಲೆಯವರಿಗೆ ಬೆಂಚು, ಡೆಸ್ಕ್, ಮೇಜು, ಚಯರ್ ಗಳನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಫೌಂಡೇಶನ್ ನಿರ್ದೇಶಕರಾದ ಲಕ್ಷ್ಮಣ ಪೂಜಾರಿ, ಬೆಂಗಳೂರು ನಗರ ಪಾಲಿಕೆ ಸದಸ್ಯರಾದ ರಾಜೇಂದ್ರ ಕುಮಾರ್, ಶಾಲಾ ಮುಖ್ಯೋಪಾಧ್ಯಾಯ ವಿಷ್ಣುಪಾಲ, ಮಂಡೆಕೋಲು ಗ್ರಾ.ಪಂ. ಸದಸ್ಯರಾದ ಬಾಲಚಂದ್ರ ದೇವರಗುಂಡ, ಮುಕುಂದ ದೇವರಗುಂಡ, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ವಾಸುದೇವ ನಾಯ್ಕ ಹಾಗೂ ಶಾಲಾ ಸಮಿತಿಯವರು, ವಿದ್ಯಾರ್ಥಿಗಳು, ಊರವರು ಇದ್ದರು.