ರೋಗಿ ಹಾಗೂ ಸವಾರರು ಅಪಾಯದಿಂದ ಪಾರು
ಸುಳ್ಯ ಕೆವಿಜಿ ಆಸ್ಪತ್ರೆಗೆ ಸೇರಿದ ಆಂಬುಲೆನ್ಸ್ ವಾಹನ ಮೆಲ್ಕಾರು ಸಮೀಪ ಟಿಪ್ಪರ್ ವಾಹನಕ್ಕೆ ಡಿಕ್ಕಿಯಾಗಿ ಆಂಬುಲೆನ್ಸ್ ವಾಹನ ಸಂಪೂರ್ಣ ಜಖಂ ಗೊಂಡ ಘಟನೆ ನವಂಬರ್ 2ರಂದು ರಾತ್ರಿ ಸಂಭವಿಸಿದೆ. ಕೆವಿಜಿ ಆಸ್ಪತ್ರೆಯಿಂದ ರೋಗಿ ಒಬ್ಬರನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಸಂದರ್ಭ ಮೆಲ್ಕಾರು ಸಮೀಪ ನರಹರಿ ಎಂಬಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಟಿಪ್ಪರ್ ಲಾರಿ ದಿವ್ಯ ರೂಪ ಗುತ್ತಿಗೆ ಸಂಸ್ಥೆಗೆ ಸೇರಿದ ವಾಹನ ವಾಗಿದ್ದು, ಘಟನೆಯಿಂದ ಅಂಬುಲೆನ್ಸ್ ಚಾಲಕನಿಗೆ ಅಥವಾ ವಾಹನದಲ್ಲಿದ್ದ ರೋಗಿಗೆ ಯಾವುದೇ ರೀತಿಯ ಅಪಾಯವಾಗಿಲ್ಲ ಎಂದು ತಿಳಿದುಬಂದಿದೆ.
ಅಪಘಾತದಿಂದ ಅಂಬುಲೆನ್ಸ್ ವಾಹನ ಸಂಪೂರ್ಣವಾಗಿ ಜಖಂಗೊಂಡಿದೆ ಎಂದು ತಿಳಿದು ಬಂದಿದೆ.