ಕಲ್ಲುಗುಂಡಿ ಸಮೀಪ ಕಡಪಾಲ ಸೇತುವೆಯ ಬಳಿ ಲಾರಿಯೊಂದು ಮೈಸೂರಿನಿಂದ ಪುತ್ತೂರು ಕಡೆಗೆ ಬರುತ್ತಿದ್ದ ಸರಕಾರಿ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ನಾಲ್ಕಾರು ಮಂದಿ ಜಖಂಗೊಂಡ ಘಟನೆ ಇಂದು ಸಂಜೆ ನಡೆದಿದೆ.
ಸಂಜೆ ಮಳೆ ಬರುತ್ತಿದ್ದ ಸಂದರ್ಭ ಲಾರಿ ಬಸ್ನ ಎದುರಿಗೆ ಬಂದು ಮುಖಾಮುಖಿ ಡಿಕ್ಕಿ ಹೊಡೆಯಿತೆಂದು ಬಸ್ನಲ್ಲಿದ್ದ ಪ್ರಯಾಣಿಕರು ತಿಳಿಸಿದ್ದಾರೆ.
ಗಾಯಗೊಂಡ ಮೂರು ಮಂದಿ ಗಾಯಾಳುಗಳನ್ನು ಅರಂತೋಡು ಸೊಸೈಟಿಯ ಅಂಬ್ಯುಲೆನ್ಸ್ನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತರಲಾಗಿದೆ. ಇನ್ನೋರ್ವ ಗಾಯಾಳು ಬಸ್ಸಿನ ಒಳಗೆ ಸಿಲುಕಿದ್ದು, ಅವರನ್ನು ಹೊರತೆಗೆಯಲು ಸೀಟ್ನ ರಾಡ್ ಕಟ್ ಮಾಡಲಾಯಿತೆಂದು ಇದೀಗ ಅವರನ್ನು ಸರಕಾರಿ ಅಂಬ್ಯುಲೆನ್ಸ್ನಲ್ಲಿ ಸುಳ್ಯ ಕಡೆಗೆ ತರಲಾಯಿತೆಂದು ತಿಳಿದುಬಂದಿದೆ.
ಆಸ್ಪತ್ರೆಗೆ ತರಲಾಗಿರುವ ಗಾಯಾಳುಗಳನ್ನು ರಾಮ ನಾಯ್ಕ್ ಪುಣಚ, ಜೀವನ್ ಯೂನತ್ ಕೆರೆಮೂಲೆ ಸುಳ್ಯ, ತಂಬಿ ವಯನಾಡ್ ಬೆಳ್ಳಾರೆ ಎಂದು ಗುರುತಿಸಲಾಗಿದೆ.