ಅಲೆಕ್ಕಾಡಿ : ರಿಕ್ಷಾ _ ಸ್ಕೂಟಿ ಡಿಕ್ಕಿ – ಗಂಭೀರ ಗಾಯ

0

ಅಲೆಕ್ಕಾಡಿಯಲ್ಲಿ ರಿಕ್ಷಾ – ಸ್ಕೂಟಿ ಪರಸ್ಪರ ಡಿಕ್ಕಿಯಾಗಿ ವ್ಯಕ್ತಿಯೋರ್ವರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ.
ಮುರುಳ್ಯ ಶಾಂತಿನಗರ ಕಡೆಯಿಂದ ನಿಂತಿಕಲ್ಲಿಗೆ ಬರುತ್ತಿದ್ದ ಮುರುಳ್ಯ ತೋಟ ಮೋನಪ್ಪ ಗೌಡರ ಪುತ್ರ ರವಿಕುಮಾರ್ ಚಲಾಯಿಸುತ್ತಿದ್ದ ಆಟೋ ಮತ್ತು ನಿಂತಿಕಲ್ಲು ಕಡೆಗೆ ಹೋಗುವ ಬೆಳ್ಳಾರೆ ಪಾಟಾಜೆ ಸಿ ಆರ್. ಸಾಹೇಬ್ ರವರ ಪುತ್ರ ಮಹಮ್ಮದ್ ಸಾಹಿದ್ ರವರು ಸ್ಕೂಟಿಯಲ್ಲಿ ತೆರಳುತ್ತಿದ್ದ ಸಂದರ್ಭ ಅಲೆಕ್ಕಾಡಿ ಶಾಲಾ ಮುಂಭಾಗದಲ್ಲಿ ಅಪಘಾತ ಸಂಭವಿಸಿತು.
ಪರಿಣಾಮ ಸ್ಕೂಟಿ ಸವಾರರಿಗೆ ಗಂಭೀರವಾಗಿ ಗಾಯಗಳಾಯಿತು.
ಕೂಡಲೇ ಅವರನ್ನು ನಿಂತಿಕಲ್ಲಿನ ಆಟೋ ಚಾಲಕ ಅಶ್ರಫ್ ರವರು ಕಡಬಕ್ಕೆ ಬಾಡಿಗೆಗೆ ಹೋಗುತ್ತಿದ್ದ ಪ್ರಯಾಣಿಕರನ್ನು ಅಲ್ಲಿಯೇ ಇಳಿಸಿ ಗಂಭೀರ ಗಾಯಗೊಂಡ ಸ್ಕೂಟಿ ಸವಾರರನ್ನು ಕಾಣಿಯೂರಿನ ಆಸ್ಪತ್ರೆಗೆ ಸಾಗಿಸಿದರು.
ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.ರಿಕ್ಷಾ ಚಾಲಕನಿಗೂ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.
ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆಂದು ತಿಳಿದು ಬಂದಿದೆ.