ಗಾಂಧಿನಗರ ರಾಜ್ಯಮಟ್ಟದ ಎಸ್ ಜೆ ಎಂ ಪ್ರತಿಭಾ ಸಂಗಮ – 2022 ಕ್ಕೆ ಚಾಲನೆ

0

ಸುನ್ನೀ ಜಂಹಿಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ರಾಜ್ಯ ಮಟ್ಟದ ‘ಪ್ರತಿಭಾ ಸಂಗಮ 2022ಕ್ಕೆ ಗಾಂಧಿನಗರ ಮುನವ್ವರುಲ್ ಇಸ್ಲಾಂ ಮದರಸಾ ವಠಾರದಲ್ಲಿ ಗಾಂಧಿನಗರ ಜಮಾತ್ ಅಧ್ಯಕ್ಷ ಕೆ ಎಂ ಮುಸ್ತಫಾ ಹಾಜಿ ಧ್ವಜಾರೋಹಣ ನಡೆಸಿ ಚಾಲನೆ ನೀಡಿದರು.
ಈ ಪ್ರತಿಭಾ ಸಂಗಮ ಇಂದು ಸಂಜೆಯ ವರೆಗೆ ನಡೆಯಲಿದ್ದು ರಾಜ್ಯದ ಹತ್ತು ಜಿಲ್ಲೆಗಳಿಂದ ಸುಮಾರು 500ಕ್ಕೂ ಹೆಚ್ಚು ಪ್ರತಿಭಾವಂತ ಮದರಸಾ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲಿದ್ದಾರೆ.
ವಿವಿಧ ಭಾಷೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜ್ಞಾನ ಮಾದರಿಗಳು, ಚಿತ್ರಕಲೆ, ಪ್ರಭಾಷಣಗಳು ಗಜಲ್ ಕವಾಲಿ ಮುಂತಾದ ಕಾರ್ಯಕ್ರಮಗಳೊಂದಿಗೆ ಎರಡು ದಿನಗಳ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದೆ.


ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಹಾಜಿ ಮುಸ್ತಫ ಜನತಾ ವಹಿಸಿದ್ದರು.
ಸ್ಥಳೀಯ ಮಸೀದಿ ಕತೀಬರಾದ ಅಶ್ರಫ್ ಕಾಮಿಲ್ ಸಕಾಫಿ ದುವಾ ನೆರವೇರಿಸಿದರು.
ವೇದಿಕೆಯಲ್ಲಿ ಎಸ್ ಜೆ ಎಂ ರಾಜ್ಯ ಸಮಿತಿ ಅಧ್ಯಕ್ಷ ಜಪ್ಪು ಮದನಿ ಉಸ್ತಾದ್, ಕಾರ್ಯದರ್ಶಿ ಎಂ ಕೆ ಕಾಮಿಲ್ ಸಕಾಫಿ, ರಾಜ್ಯ ಸ್ವಾಗತ ಸಮಿತಿ ಅಧ್ಯಕ್ಷ, ರಾಜ್ಯಮಟ್ಟದ ಕಾರ್ಯಕ್ರಮದ ಸುಳ್ಯ ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಎಸ್ಎಂ ಹಮೀದ್, ಸುಳ್ಯ ನಗರ ಪಂಚಾಯತಿ ಸದಸ್ಯರುಗಳಾದ ಸದಸ್ಯರುಗಳಾದ ಕೆ ಎಸ್ ಉಮ್ಮರ್, ಶರೀಫ್ ಕಂಠಿ, ಅನ್ಸಾರಿಯಾ ಮಸೀದಿ ಕತಿಬರಾದ ಉಮರ್ ಮುಸ್ಲಿಯರ್ ಮರದಾಳ, ಸುಳ್ಯ ತಾಲೂಕು ಎಸ್ ಜೆ ಎಂ ಸಮಿತಿ ಅಧ್ಯಕ್ಷ ಮಹಮ್ಮದ್ ಸಕಾಫಿ, ಇಬ್ರಾಹಿಂ ಸಕಾಫಿ ಪುಂಡ್ಡೂರು ಲತೀಫ್ ಸಕಾಫಿ ಗೂನಡ್ಕ ಅಬ್ದುಲ್ ರಜಾಕ್ ರಾಜಧಾನಿ,ಅಡ್ವಕೇಟ್ ಅಬೂಬಕ್ಕರ್, ಎಸ್ ಸಮ್ಸುದ್ದೀನ್ ಅರಂಬೂರು ಗಾಂಧಿನಗರ ಜಮಾತ್ ಕಮಿಟಿ ಪದಾಧಿಕಾರಿಗಳು ಸದಸ್ಯರುಗಳು, ರಾಜ್ಯ ಸಮಿತಿ ಮುಖಂಡರು ಉಪಸ್ಥಿತರಿದ್ದರು.