ಪೈಲಾರಿನಲ್ಲಿ ಮಿತ್ರ ಕಪ್ 2022 ವಾಲಿಬಾಲ್ ಪಂದ್ಯಾಟದ ಸಮಾರೋಪ ಸಮಾರಂಭ – ಬಹುಮಾನ ವಿತರಣೆ ಪ್ರಥಮ- ಬಂಟಮಲೆ ಫ್ರೆಂಡ್ಸ್ ಹಾಸನಡ್ಕ ದ್ವಿತೀಯ-ಸನ್ ರೈಸ್ ಕೋಲ್ಚಾರು

0

ಪೈಲಾರು ಮಿತ್ರ ವೃಂದ ಇದರ ವತಿಯಿಂದ ನಡೆದ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟದ ಸಮಾರೋಪ ಸಮಾರಂಭವು ಮತ್ತು ವಿಜೇತ ತಂಡಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನ.27 ರಂದು ಸಂಜೆ ಪೈಲಾರು ಶಾಲಾ ಮೈದಾನದಲ್ಲಿ ನಡೆಯಿತು.


ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ಜಯಪ್ರಕಾಶ್ ರೈ ಚೊಕ್ಕಾಡಿ ಅದ್ಯಕ್ಷತೆ ವಹಿಸಿದ್ದರು. ವಿಜೇತ ತಂಡಗಳಿಗೆ ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್
ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಬಹುಮಾನ ವಿತರಿಸಿದರು. ಮುಖ್ಯ ಅಭ್ಯಾಗತರಾಗಿ ಜಲದುರ್ಗಾದೇವಿ ಅರ್ಥ್ ಮೂವರ್ಸ್ ಮಾಲಕ ಪದ್ಮನಾಭ ಬೀಡು, ಅಮರಮುಡ್ನೂರು ಪಂಚಾಯತ್ ಸದಸ್ಯ ವೆಂಕಟ್ರಮಣ ಗೌಡ ಇಟ್ಟಿಗುಂಡಿ, ಜಯಪ್ರಕಾಶ್ ದೊಡ್ಡಿಹಿತ್ಲು,
ಕುಕ್ಕುಜಡ್ಕ ಸುಧಾ ಕ್ಲಿನಿಕ್ ನ ಡಾ.ಸನತ್ ದೇರಾಜೆ, ಚೊಕ್ಕಾಡಿ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಅರುಣ್ ನಾಯರ್ ಕಲ್ಲು,‌ ಮಿತ್ರ ವೃಂದದ ಕೋಶಾಧಿಕಾರಿ ಹರ್ಷಿತ್ ದಾತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ವಿವೇಕ್ ಪಡ್ಪು ಸ್ವಾಗತಿಸಿದರು. ಮಿತ್ರ ವೃಂದದ ಅಧ್ಯಕ್ಷ ಶಶಿಕಾಂತ್ ಮಿತ್ತೂರು ವಂದಿಸಿದರು. ತೀರ್ಥೇಶ್ ಯಾದವ್ ನಾರ್ಣಕಜೆ ಮತ್ತು ಸಲೀಂ ರಾಮಕುಂಜ ಕಾರ್ಯಕ್ರಮ ನಿರೂಪಿಸಿದರು.
ವಾಲಿಬಾಲ್ ಪಂದ್ಯಾಟವು 8 ತಂಡಗಳ ಮಧ್ಯೆ ಲೀಗ್ ಮಾದರಿಯಲ್ಲಿ ಸುಳ್ಯ ಕಡಬ ಮತ್ತು ಪುತ್ತೂರು ತಾಲೂಕಿನ ಕ್ರೀಡಾಪಟುಗಳ ನಡುವೆ ಏರ್ಪಡಿಸಲಾಗಿತ್ತು.
ಪಂದ್ಯಾಟದಲ್ಲಿ ಪ್ರಥಮ ಬಹುಮಾನ ಬಂಟಮಲೆ ಫ್ರೆಂಡ್ಸ್ ಹಾಸನಡ್ಕ ರೂ.11022/- ಮತ್ತು ಶಾಶ್ವತ ಫಲಕ,
ದ್ವಿತೀಯ ಬಹುಮಾನ ಸನ್ ರೈಸ್ ಕೋಲ್ಚಾರು ರೂ.6022/- ಮತ್ತು ಶಾಶ್ವತ ಫಲಕ ಪಡೆದುಕೊಂಡಿತು.
ತೃತೀಯ ಬಹುಮಾನ ರಾಜ್ ಸೌಂಡ್ಸ್ ಉಬರಡ್ಕ
ಚತುರ್ಥ ಬಹುಮಾನ ವಿವೇಕಾನಂದ ಫ್ರೆಂಡ್ಸ್ ಅಡ್ಕಾರ್ ಶಾಶ್ವತ ಫಲಕವನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ
ವೈಯಕ್ತಿಕ ಬಹುಮಾನವನ್ನು ನೀಡಲಾಯಿತು. ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಬಹುಮಾನವನ್ನು ನೀಡಲಾಯಿತು. ಪಂದ್ಯಾಟದಲ್ಲಿ
ವಿವೇಕಾನಂದ ಫ್ರೆಂಡ್ಸ್ ಅಡ್ಕಾರ್, ಪದವು ವಾರಿಯರ್ಸ್, ಬಂಟಮಲೆ ಫ್ರೆಂಡ್ಸ್ ಹಾಸನಡ್ಕ, ತುಳುನಾಡ ಜವನೆರ್ ,ಆರ್ವಿ ಆಟ್ಯಾ ಕರ್ಸ್, ರಾಜ್ ಸೌಂಡ್ಸ್ ಉಬರಡ್ಕ, ನಾಗಶ್ರಿ ಆಟ್ಯಾಕರ್ಸ್ ಪೈಲಾರು, ‌ಸನ್ ರೈಸ್ ಕೋಲ್ಚಾರು ತಂಡಗಳು ಸ್ಪರ್ಧಿಸಿದ್ದರು.
ಮಿತ್ರ ವೃಂದದ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು. ಕ್ರೀಡಾ ಪಟುಗಳಿಗೆ ಮತ್ತು ಕ್ರೀಡಾಭಿಮಾನಿಗಳಿಗೆ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.