ಯದ್ವಾತದ್ವಾ ಜೀಪು ಚಲಾವಣೆ, ಕಾರು ಬೈಕ್‌ಗಳಿಗೆ ಡಿಕ್ಕಿ, ಚಾಲಕ ಪೊಲೀಸ್ ವಶ

0

ಸುಳ್ಯ ನಗರದ ಅಂಬಟೆಡ್ಕದಲ್ಲಿ ಜೀಪು ಚಾಲಕನ ಅವಾಂತರಕ್ಕೆ ನಾಲ್ಕು ಬೈಕ್ ಮತ್ತು ಒಂದು ಕಾರು ಹಾನಿಯಾದ ಘಟನೆ ವರದಿಯಾಗಿದೆ. ಡಿ.೧ ರಂದು ಸಂಜೆ ೭ ಗಂಟೆ ಸುಮಾರಿಗೆ ಸುಳ್ಯದ ಮುಖ್ಯರಸ್ತೆಯಿಂದ ರಥಬೀದಿಯಾಗಿ ಬಂದ ಜೀಪು ಚೆನ್ನಕೇಶವ ದೇವಸ್ಥಾನದ ಬಳಿ ಹಾಕಲಾಗಿರುವ ಬ್ಯಾರಿ ಕೇಡ್‌ಗೆ ಡಿಕ್ಕಿ ಹೊಡೆದು ಅಲ್ಲಿಂದ ವೇಗವಾಗಿ ಬಂದು ಅಂಬಟೆಡ್ಕ ನವರತ್ನ ಹೋಟೇಲ್ ಮುಂಭಾಗದಲ್ಲಿ ನಿಲ್ಲಿಸಿದ್ದ ನಾಲ್ಕು ಬೈಕ್ ಮತ್ತು ಕಾರಿಗೆ ಡಿಕ್ಕಿಹೊಡೆದು ನಿಂತಿತು.
ಈ ಅಪಘಾತಕ್ಕೆ ಜೀಪು ಚಾಲಕ ಅತೀವ ಮದ್ಯ ಸೇವನೆಯೇ ಕಾರಣವೆಂದು ಸ್ಥಳೀಯರು ಹೇಳುತ್ತಿದ್ದಾರೆ. ಘಟನೆಯ ಸಂದರ್ಭ ಚಾಲಕ ತೂರಾಡುತ್ತಿದ್ದ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ.


ಕೆ.ಎ ೧೩ ಓ ೪೫೯೯ ನಂಬರಿನ ನಂದಾದೀಪ ಹೆಸರಿನ ಜೀಪ್ ಇದಾಗಿದ್ದು ಸ್ಥಳಕ್ಕೆ ಸುಳ್ಯ ಪೋಲಿಸರು ಧಾವಿಸಿ ಎಲ್ಲಾ ವಾಹನಗಳನ್ನು ಠಾಣೆಗೆ ಒಯ್ಯಲಾಗಿದೆ ಎಂದು ತಿಳಿದು ಬಂದಿದೆ.