ಸುಬ್ರಮಣ್ಯಕೆ.ಎಸ್.ಎಸ್. ಕಾಲೇಜು ವಿದ್ಯಾರ್ಥಿಗಳಿಂದ ಭಿತ್ತಿ ಚಿತ್ರ ಜಾಗೃತಿ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು ಸುಬ್ರಮಣ್ಯ ಇಲ್ಲಿನ ವಾಣಿಜ್ಯ ಹಾಗೂ ಉದ್ಯಮಾಡಳಿತ ವಿಭಾಗದ ವತಿಯಿಂದ ತೃತೀಯ ಬಿಬಿಎ ವಿದ್ಯಾರ್ಥಿಗಳು ಚಂಪಾ ಷಷ್ಠಿ ಪ್ರಯುಕ್ತ ಕುಮಾರ ಧಾರದಿಂದ ಸುಬ್ರಹ್ಮಣ್ಯ ದೇವಾಲಯದ ವರೆಗೆ ಬಿತ್ತಿ ಚಿತ್ರಗಳನ್ನು ಲಗತ್ತಿಸುವ ಮೂಲಕ ಜಾಗೃತಿ ಮೂಡಿಸಿದರು.

ಬಿತ್ತಿ ಚಿತ್ರ ತಯಾರಿಸಲು ವಾಣಿಜ್ಯ ಹಾಗೂ ಉದ್ಯಮಾಡಳಿತ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಲತಾ ಬಿ.ಟಿ ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀಮತಿ ರಮ್ಯ ಇವರು ಮಾರ್ಗದರ್ಶನ ನೀಡಿದರು.