ಅರಂತೋಡು: ಅಡಿಕೆ ಹಳದಿರೋಗ ಕುರಿತು ವಿಚಾರ ವಿನಿಮಯ

0

ನ. 28 ರಂದು ಅರಂತೋಡಿನಲ್ಲಿ ಧರ್ಮಸ್ತಳ ಗ್ರಾಮಾಭಿವೃದ್ಧಿ ಯೋಜನೆ ಸೇವಾನಿರತರ ಭಜನೆ ತಂಡದ ಸಭೆಯಲ್ಲಿ ಅಡಿಕೆಗೆ ಹಳದಿರೋಗ ವಿಚಾರವಾಗಿ ಚರ್ಚಿಸಲಾಯಿತು. ಈ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಯವರನ್ನು ಭೆಟಿ ಮಾಡಿ ಅವರ ಆಶಿರ್ವಾದವನ್ನು ಪಡೆದು ಯೋಜನೆಯಡಿಯಲ್ಲಿ ಹಳದಿ ರೊಗ ಬಾಧಿತರ ಕುರಿತಾದ ಸಭೆಗಳನ್ನು ನಡೆಸುವ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಸುಳ್ಯ ತಾಲುಕು ಜನಜಾಗ್ರತಿ ಸಮಿತಿಯ ಮಾಜಿ ಅಧ್ಯಕ್ಷ ಭವಾನಿಶಂಕರ ಅಡ್ತಲೆ, ಸದಸ್ಯ ಯಂ ವೆಂಕಪ್ಪ ಗೌಡ ಮಾಹಿತಿ ನೀಡಿದರು. ಈ ಸಂಧರ್ಭದಲ್ಲಿ ಸಂಪಾಜೆ ವಲಯದ ಜನಜಾಗ್ರತಿ ವೇದಿಕೆಯ ಅಧ್ಯಕ್ಷ ಲೋಕನಾಥ್ ಅಮೆಚೂರ್, ಮುಖ್ಯಸ್ತರಾದ ಪದ್ಮನಾಭ ಕುರುಂಜಿ, ಕಿಶೋರ ಉಳುವಾರ ಮೇಲ್ವಿಚಾರಕ ಸುಧೀರ್ ನೆಕ್ರಾಜೆ, ಹಾಗು ಸೇವಾಪ್ರತಿನಿದಿಗಳು ಭಾಗವಹಿಸಿದ್ದರು.