ಹರಿಹರ ಪಲ್ಲತ್ತಡ್ಕ: ಸಂಜೀವಿನಿ ಗ್ರಾಮ ಒಕ್ಕೂಟ ಮಟ್ಟದ ಸದಸ್ಯರಿಗೆ ಸ್ಪರ್ಧೆ, ಕನ್ನಡ ರಾಜ್ಯೋತ್ಸವ ಆಚರಣೆ

0

ಪ್ರಕೃತಿ ಸಂಜೀವಿನಿ ಗ್ರಾಮ ಒಕ್ಕೂಟ ಮಟ್ಟದ
ಹರಿಹರ ಪಲ್ಲತ್ತಡ್ಕ ಇದರ ಸದಸ್ಯರಿಂದ ವಿವಿಧ ಸ್ಪರ್ಧೆಗಳನ್ನು ಮತ್ತು ಕನ್ನಡ ರಾಜ್ಯೋತ್ಸವ ಆಚರಣೆ ನ.29 ರಂದು ಆಚರಿಸಲಾಯಿತು.
ಪಂಚಾಯತ್ ಅಧ್ಯಕ್ಷ ಜಯಂತ ಬಾಳುಗೋಡು ದೀಪ ಬೆಳಗಿಸಿ ಉಪಸ್ಥಿತರಿದ್ದರು.


ಸಂಜೀವಿನಿ ಒಕ್ಕೂಟದ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶರ್ಮಿಳಾ ಕೆ, ಕಾರ್ಯದರ್ಶಿ ಪ್ರತಿಮಾ’ ಹರಿಹರ ಮತ್ತು ಒಕ್ಕೂಟದ ಪದಾಧಿಕಾರಿಗಳು, ಕೃಷಿ ಸಖಿ ನವ್ಯಾ ಕೊತ್ನಡ್ಕ, ಬಾಳುಗೋಡು& ಹರಿಹರ
ವಾರ್ಡಿನ ಸಂಜೀವಿನಿ ಸದಸ್ಯರುಗಳು, ಗ್ರಾಮ ಪಂಚಾಯತ್ ಅಭಿವೃದಿ
ಅಧಿಕಾರಿಗಳಾದ ಪುರುಷೋತ್ತಮ ಮಣಿಯಾನ,
ಗ್ರಾಮ ಪಂಚಾಯತ್‌ ಸದಸ್ಯರು, ಪಂಚಾಯತ್ ಸಿಬ್ಬಂದಿಗಳು, ಎಂ ಬಿ ಕೆ ಮತ್ತು ಎಲ್ ಸಿ ಆರ್ ಪಿ ಗಳು
ಉಪಸ್ಥಿತರಿದ್ದರು. ನಾಡಗೀತೆಯ ತೀರ್ಪುಗಾರರಾಗಿ ನಿವೃತ್ತ ಉಪನ್ಯಾಸರಾದ ಶ್ರೀಧರ್ ಭಾಗವತ್
ಕಜ್ಜೋಡಿಯವರು ಉಪಸ್ಥಿತರಿದ್ದರು. ಎಂ ಬಿ ಕೆ ಶ್ರೀಮತಿ ವೇದಾವತಿ ಕಲ್ಲೇಮಠ ಕಾರ್ಯಕ್ರಮ ನಿರೂಪಿಸಿದರು.