ಕರ್ನಾಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆ ಐವರ್ನಾಡು ಗ್ರಾಮ ಘಟಕ ಉದ್ಘಾಟನೆ

0

ಕರ್ನಾಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆ ಸುಳ್ಯ ತಾಲೂಕು ಐವರ್ನಾಡು ಗ್ರಾಮ ಘಟಕವನ್ನು ಡಿ.5 ರಂದು ಐವರ್ನಾಡು ಕೃಷಿ ಕಾಲೋನಿಯಲ್ಲಿ ಉದ್ಘಾಟನೆ ಮಾಡಲಾಯಿತು.

ಉದ್ಘಾಟನೆಯನ್ನು ಕುಂಞಾ ಕೃಷಿ ಕಾಲೋನಿ‌ ಯವರು ನೆರವೇರಿಸಿದರು ರಾಜ್ಯದ್ಯಕ್ಷರಾದ ಪಿ.ಸುಂದರ ಪಾಟಾಜೆ ಸಂಘಟನೆಯ ಬಗ್ಗೆ ಮುಖ್ಯ ಭಾಷಣ ಮಾಡಿದರು.


ಸುಳ್ಯ ತಾಲೂಕು ಉಪಾಧ್ಯಕ್ಷರಾದ ರಮೇಶ ಕೊಡಂಕಿರಿ ಇವರು ಸ್ವಾಗತಿಸಿ ವಂದಿಸಿದರು. ವೇದಿಕೆಯಲ್ಲಿ ಜಿಲ್ಲಾಧ್ಯಕ್ಷರಾದ ಪರಮೇಶ್ವರ ಕೆಮ್ಮಿಂಜೆ ಸುಳ್ಳ ತಾಲೂಕು ಕಾರ್ಯದರ್ಶಿ ಆನಂದ ರಂಗತ ಮಳೆ ಮಿತ್ತೂರು ಉಬರಡ್ಕ ಗ್ರಾಮ ಘಟಕದ ಕಾರ್ಯದರ್ಶಿ ಗಣೇಶ್ ಪಾಲಡ್ಕ ಇವರೆಲ್ಲರೂ ವೇದಿಕೆಯಲ್ಲಿ ಉಪಸ್ತರಿದ್ದರು ಮತ್ತು ಕೃಷಿ ಕಾಲೋನಿಯ ಹಲವಾರು ಮಂದಿ ಭಾಗಿಯಾಗಿದ್ದರು ನಂತರ ಐವರ್ನಾಡು ಘಟಕದ ಅಧ್ಯಕ್ಷ ಗುರುವ ಕೃಷಿ ಕಾಲೋನಿ, ಉಪಾಧ್ಯಕ್ಷರಾಗಿ ಕೊರಗಪ್ಪ ಕೊಯ್ಲಾ ಕಾರ್ಯದರ್ಶಿಯಾಗಿ ಪ್ರವೀಣ ಕೃಷಿ ಕಾಲೋನಿ ಜೊತೆ ಕಾರ್ಯದರ್ಶಿಯಾಗಿ ಗಣೇಶ್ ಕೃಷಿ ಕಾಲೋನಿ ಇವರನ್ನು ಆಯ್ಕೆ ಮಾಡಲಾಯಿತು.