ಬಾಳುಗೋಡು : ನೂತನ ಕೊಠಡಿ ನಿರ್ಮಾಣಕ್ಕೆ ಹಾಗೂ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ

0

ಬಾಳುಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿ ನಿರ್ಮಾಣಕ್ಕೆ ಹಾಗೂ ವಿವಿಧ ಕಾಮಗಾರಿಗಳಿಗೆ ಸಚಿವ ಎಸ್.ಅಂಗಾರ ಗುದ್ದಲಿ ಪೂಜೆ ಇಂದು ನೆರವೇರಿಸಿದರು.
ಈ ಸಂದರ್ಭ ಗ್ರಾ.ಪಂ.ಅಧ್ಯಕ್ಷ ಜಯಂತ ಬಾಳುಗೋಡು, ಕೆ.ಎಫ್.ಡಿ.ಸಿ. ಅಧ್ಯಕ್ಷ ಎ.ವಿ. ತೀರ್ಥರಾಮ, ಶಿಕ್ಷಣಾಧಿಕಾರಿ ಮಹೇದೇವ, ನ್ಯಾಯವಾದಿ ವಿನಯ ಮುಳುಗಾಡು, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹಾಗೂ ಪ್ರಮುಖರಾದ ವೆಂಕಟ್ ವಳಲಂಬೆ, ಚಂದ್ರಹಾಸ ಶಿವಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿಮ್ಮತ್ ಕಿರಿಭಾಗ, ರಾಧಾಕೃಷ್ಣ, ಅಂಬಾದಾಸ್ ಶಿಲ್ಪಾ ಕೊತ್ನಡ್ಕ, ಬಿಂದು, ಜಯರಾಮ, ವಾಸುದೇವ ಕಿರಿಭಾಗ, ಜಯರಾಮ ಆಲ್ಕಬೆ, ರಾಜೇಶ್ ಕಿರಿಭಾಗ, ಸುಂದರ ಮುಚ್ಚಾರ, ವಿಶ್ವನಾಥ ಕಿರಿಭಾಗ ಮೊದಲಾದವರು ಹಾಗೂ ಗ್ರಾಮಸ್ಥರು ಹಾಜರಿದ್ದರು.