ಡಿ. 20, 21, 22 ರಂದು ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮಿಗಳ ಗ್ರಾಮ ವಾಸ್ತವ್ಯ, ಕಾರ್ಯಕ್ರಮ ಯಶಸ್ವಿಗೊಳಿಸಲು ಡಾ.ರೇಣುಕಾಪ್ರಸಾದ್ ಕೆ.ವಿ.ಮನವಿ

0

ಡಿಸೆಂಬರ್ ೨೦, ೨೧, ೨೨ ರಂದು ಗೌಡರ ಆರಾಧನಾ ಕ್ಷೇತ್ರವಾದ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮಿಗಳು ಸುಳ್ಯ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಸುಳ್ಯ ದ ಕುಲಬಾಂಧವರು ಒದಗಿ ಬಂದ ಯೋಗ ಭಾಗ್ಯವೆಂದು ಪರಿಗಣಿಸಿ,ಏಕ ಮನಸ್ಸಿನಿಂದ ಪೂಜ್ಯರ ಆಗಮನದ ಪೂರ್ವಸಿದ್ಧತೆಗಾಗಿ
ತಯಾರಾಗಬೇಕಾಗಿದ್ದು, ಸುಳ್ಯ ತಾಲೂಕಿನ ಗೌಡ ಸಮುದಾಯದವರು ಸ್ವಾಮೀಜಿಗಳ ಸರ್ವ ಕಾರ್ಯಗಳಲ್ಲಿ ಭಾಗವಹಿಸಿ, ಜವಾಬ್ದಾರಿ ನಿರ್ವಹಿಸಬೇಕೆಂದು ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾಪ್ರಸಾದ್ ಕೆ. ವಿ. ವಿನಂತಿಸಿದ್ದಾರೆ.