ಪೈಚಾರು ಬಳಿ ಹೆದ್ದಾರಿಯಲ್ಲಿ ಆಯಿಲ್, ದ್ವಿಚಕ್ರ ವಾಹನಗಳು ಸ್ಕಿಡ್, ರಸ್ತೆಗಳಲ್ಲಿ ಚೀಲಗಳನ್ನು ಇಟ್ಟು ಸವಾರರಿಗೆ ಮುನ್ನೆಚ್ಚರಿಕೆ ನೀಡಿದ ಸ್ಥಳೀಯರು

0

ಸುಳ್ಯ :ಪೈಚಾರು ಬಳಿ ಮಾಣಿ ಮೈಸೂರು ಹೆದ್ದಾರಿಯಲ್ಲಿ ಆಯಿಲ್ ಬಿದ್ದಿರುವ ಕಾರಣ ಈ ಪ್ರದೇಶದಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಯಿತು.
ಶಾಂತಿನಗರ ಸ್ಟೇಡಿಯಂಗೆ ತಿರುಗುವ ಬಳಿ ರಸ್ತೆಯ ನಡುಭಾಗದಲ್ಲಿ ವಿಪರೀತ ಆಯಿಲ್ ಬಿದ್ದಿದ್ದು ಘಟನೆಯಿಂದ ಹಲವಾರು ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬಿದ್ದಿರುತ್ತಾರೆ ಎಂದು ಸ್ಥಳೀಯರು ಸುದ್ದಿಗೆ ಮಾಹಿತಿ ನೀಡಿದ್ದಾರೆ.


ಘಟನೆಯಿಂದ ಹೆಚ್ಚಿನ ಅನಾಹುತ ಯಾವುದು ಸಂಭವಿಸಿಲ್ಲ, ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಈ ಭಾಗದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಮಣ್ಣುಗಳನ್ನು ತುಂಬಿ ಮುನ್ನೆಚ್ಚರಿಕ ಕ್ರಮವಾಗಿ ರಸ್ತೆಯಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.
ಆಯಿಲ್ ಯಾವ ವಾಹನದಿಂದ ಬಿದ್ದಿರುತ್ತದೆ ಎಂಬ ಮಾಹಿತಿ ಇನ್ನೂ ಖಚಿತವಾಗಿಲ್ಲ.