ಅರಂತೋಡು : ತೆಂಗಿನ ಮರ ಮೈಮೇಲೆ ಬಿದ್ದು ಮಹಿಳೆ ಗಂಭೀರ

0


ತೆಂಗಿನ ಮರ ಮೈಮೇಲೆ ಬಿದ್ದು ಮಹಿಳೆ ಗಂಭೀರ ಗಾಯಗೊಂಡ ಘಟನೆ ಅರಂತೋಡಿನಿಂದ ನಿನ್ನೆ ವರದಿಯಾಗಿದೆ.
ಅರಂತೋಡು ಉಳುವಾರು ಮೇದಪ್ಪ ಗೌಡರ ತೋಟದಲ್ಲಿ ಕೊಡೆಂಕಿರಿಯ ಬಾಲಣ್ಣರವರ ಪತ್ನಿ ಶ್ರೀಮತಿ ಕಮಲರವರು ಅಡಿಕೆ ಹೆಕ್ಕುತ್ತಿದ್ದಾಗ ಒಣಗಿದ ತೆಂಗಿನ ಮರವೊಂದು ಕಮಲರವರ ಮೇಲೆ ಬಿದ್ದು ಗಂಭೀರ ಗಾಯಗಳಾಯಿತು. ಕೂಡಲೇ ಸ್ಥಳಕ್ಕೆ ಬಂದ ಮೇದಪ್ಪರವರು ಕಮಲರವರನ್ನು ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಂಬ್ಯುಲೆನ್ಸ್‌ನಲ್ಲಿ ಸುಳ್ಯ ಕೆ.ವಿ.ಜಿ. ಆಸ್ಪತ್ರೆಗೆ ಕರೆತಂದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ವಾಪಾಸ್ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ.