ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ಕಲ್ಲೋಣಿ ಇದರ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಅಂಗವಾಗಿ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮವು ದ. 4 ರಂದು ಆಡಳಿತ ಸಮಿತಿಯ ಅಧ್ಯಕ್ಷರಾದ ವಿ. ಕಂದಸ್ವಾಮಿ ಇವರ ನೇತೃತ್ವ ದಲ್ಲಿ ನಡೆಯಿತು. ಆಡಳಿತ ಸಮಿತಿಯ ಪ್ರದಾನ ಕಾರ್ಯದರ್ಶಿ ಲೋಕನಾಥ್ ಸ್ವಾಗತಿದರು. ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಪ್ರದೀಪ್ ರೈ ಪನ್ನೇ ಪ್ರಾಸ್ತಾವಿಕಾ ಬಾಷಣ ಮಾಡಿದರು.ಸುನಿಲ್ ರೈ ಪುಡ್ಕಜೆ ಮಾಜಿ ಅಧ್ಯಕ್ಷರು ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನ ಬೆಳ್ಳಾರೆ ಮನವಿ ಪತ್ರ ಬಿಡುಗಡೆ ಮಾಡಿದರು. ರಾಜೇಂದ್ರ ಅಧ್ಯಕ್ಷರು ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ನರ್ಸರಿ ಕಾಲೋನಿ ಐರ್ವನಾಡು. ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯರಾದ ಮಣಿಕಂಠ ಮತ್ತು ಭವ್ಯ ರವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಡಳಿತ ಸಮಿತಿಯ ಖಜಾಂಚಿಯಾದ ವೇಲುಮೋಹನ್ ರವರು ವಂದನಾರ್ಪಣೆ ಮಾಡಿದರು.
Home Uncategorized ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ಕಲ್ಲೋಣಿ ಇದರ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಅಂಗವಾಗಿ ಮನವಿ ಪತ್ರ...