ಕೆಯ್ಯೂರು ಭಜರಂಗದಳ ಆಶ್ರಯದಲ್ಲಿ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಎಫ್.ವೈ.ಸಿ ಯೇನೆಕಲ್ ಪ್ರಥಮ

0

ವಿಶ್ವ ಹಿಂದೂ ಪರಿಷತ್, ಭಜರಂಗದಳ ಮಾತೃ ಶಕ್ತಿ ದುರ್ಗಾ ವಾಹಿನಿ ಕೆಯ್ಯೂರು ಘಟಕ ಇದರ ಐದನೇ ವರ್ಷದ ಸ್ಥಾಪಕ ದಿವಸದ ಪ್ರಯುಕ್ತ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಎಫ್.ವೈ.ಸಿ. ಯೇನೆಕಲ್ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಅಂತಿಮ ಕದನದಲ್ಲಿ ಕೆ.ಎಫ್.ಡಿ.ಸಿ. ಕೌಡಿಚಾರ್ ತಂಡವನ್ನು ಸೋಲಿಸಿದ ಎಫ್.ವೈ.ಸಿ ಯೇನೆಕಲ್ ತಂಡ ಪ್ರಥಮ ಸ್ಥಾನವನ್ನು ಗಳಿಸಿಕೊಂಡಿತು. ತಂಡದಲ್ಲಿ ಮಹೇಶ್, ಮಿಥುನ್, ವಿಷ್ಣು, ನಿಶಾಂತ್, ನಿತಿನ್, ಯತಿನ್ ಪಂಜ, ಜೀವನ್ ಚೊಕ್ಕಾಡಿ(ನಾಯಕ) ಆಟವಾಡಿದರು. ತಂಡದ ನಿಶಾಂತ್ ಯಂ. ಉತ್ತಮ ಎತ್ತುವಿಕೆ ಪ್ರಶಸ್ತಿ ಮತ್ತು ನಿತಿನ್ ಉತ್ತಮ ಹೊಡೆತಗಾರ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು.