ಕಲ್ಮಡ್ಕ:ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ -ಸಂಕ್ರಮಣ ತಂಬಿಲ, ಒತ್ತೆಕೋಲ ನಡಾವಳಿ ಪ್ರಯುಕ್ತ ಕೊಳ್ಳಿ ಮುಹೂರ್ತ

0

ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಜ.15 ರಂದು ವಾರ್ಷಿಕ ಒತ್ತೆಕೋಲ ನಡಾವಳಿ ಪ್ರಯುಕ್ತ ಕೊಳ್ಳಿ ಮುಹೂರ್ತ ಹಾಗೂ ಸಂಕ್ರಮಣ ತಂಬಿಲ ಸೇವೆಯನ್ನು ದೈವಸ್ಥಾನದ ಪ್ರಧಾನ ಪೂಜಾರಿ ಗಂಗಾಧರ ಮಣಿಯಾಣಿ ಯವರ ಮೂಲಕ ನೆರವೇರಿಸಲಾಯಿತು.

ಈ ಸಂದರ್ಭ ಕ್ಷೇತ್ರದ ಮೊಕ್ತೇಸರ ರಾಮಚಂದ್ರ ಎಡಪತ್ಯ.ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷ ಲೋಕಯ್ಯ ನಾಯ್ಕ ಬೊಳಿಯೂರು, ಉಪಾಧ್ಯಕ್ಷರಾದ ಶ್ರೀ ಓಬಯ್ಯ ನಾಯ್ಕ ಮಾಳಪ್ಪಮಕ್ಕಿ, ಬಾಳಪ್ಪ ನಾಯ್ಕ ಕಾಚಿಲ ಹಾಗೂ ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ವೇದಾವತಿ ಮಹಾಬಲ ಗೌಡ ಹಾಗೂ ಸಮಿತಿ ಸದಸ್ಯರು ಮತ್ತು ಊರಿನ ಭಕ್ತಾದಿಗಳು ಭಾಗವಹಿಸಿದ್ದರು.

ಕಾಚಿಲ ಮಹಾವಿಷ್ಣುಮೂರ್ತಿ ದೈವದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಒತ್ತೆಕೋಲ ನಡಾವಳಿಯು ಬ್ರಹ್ಮ ಶ್ರೀ ವೇದಮೂರ್ತಿ ರವೀಶ ತಂತ್ರಿ ವರ್ಗದವರ ಮೂಲಕ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು ಈ ವರುಷವೂ ದಿನ ನಿಗದಿಯಂತೆ ಫೆ. 25ರಂದು ನಡೆಯಲಿದೆ.