ಎಸ್ಎಂಎ ವತಿಯಿಂದ ಬೆಳ್ಳಾರೆ ಜೋನಲ್ ವ್ಯಾಪ್ತಿಯ ಲೀಡರ್ಸ್ ಮೀಟ್ ಕಾರ್ಯಗಾರ

0

ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಬೆಳ್ಳಾರೆ ಝೋನಲ್ ವತಿಯಿಂದ ಸುಳ್ಯ, ಬೈತಡ್ಕ, ಕಡಬ, ರೀಜಿನಲ್ ಗೊಳಪಟ್ಟ ಸುನ್ನತ್ ಜಮಾಅತಿನ ಮಸ್ಜಿದ್ ಮತ್ತು ಮದರಸ ಆಡಳಿತ ಸಮಿತಿಗಳ ಪದಾಧಿಕಾರಿಗಳ ಮತ್ತು ಮುಖಂಡರ ಲೀಡರ್ಸ್ ಮೀಟ್ ಕಾರ್ಯಕ್ರಮ ಜ 15 ರಂದು ಪಂಜ ನೆಕ್ಕಿಲ ಮದರಸ ಸಭಾಂಗಣದಲ್ಲಿ ನಡೆಯಿತು.


ಈ ಕಾರ್ಯಕ್ರಮದಲ್ಲಿ ಎಸ್ ಎಮ್ ಎ ರಿಜಿನಲ್ ಸಮಿತಿಯ ಸದಸ್ಯರು, ಮಸೀದಿ ಮದ್ರಸಾ ಆಡಳಿತ ಸಮಿತಿಯ ಅಧ್ಯಕ್ಷರುಗಳು, ಹಾಗೂ ಪದಾಧಿಕಾರಿಗಳು, ಮಸೀದಿ ಖತೀಬರು ಹಾಗೂ ಮದರಸ ಅಧ್ಯಾಪಕರುಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್ಎಂಎ ಈಸ್ಟ್ ಜಿಲ್ಲಾ ಸಮಿತಿ ಅಧ್ಯಕ್ಷ ಸೈಯ್ಯಿದ್ ಸಾದಾತ್ ಕರ್ವೆಲ್ ತಂಙಳ್ ಉದ್ಘಾಟಿಸಿದರು.
ಸಯ್ಯಿದ್ ಅಬ್ದುಲ್ ಲತೀಫ್ ಬಾಅಲವಿ ತಂಙಳ್ ದುವಾ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಯ್ಯಿದ್ ಜಲಾಲುದ್ದೀನ್ ತಂಙಳ್ ಅಲ್ ಹಾದಿ ಪೂಸೋಟ್ ಕಾರ್ಯಗಾರವನ್ನು ನಡೆಸಿ ಮಸ್ಜಿದ್ ಮತ್ತು ಮದರಸ ಆಡಳಿತ ಸಮಿತಿಯ ಅಧ್ಯಕ್ಷರ ಪದಾಧಿಕಾರಿಗಳ ಸದಸ್ಯರ ಕರ್ತವ್ಯ ಪಾಲನೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಬೆಳ್ಳಾರೆ ಜೋನಲ್ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಬೀಡು, ಸ್ಥಳೀಯ ಮಸೀದಿ ಕಮಿಟಿ ಅಧ್ಯಕ್ಷ ಉಮ್ಮರ್ ಸೀಗೆಯಡಿ ಹಾಗೂ ಜಿಲ್ಲಾ ಸಮಿತಿ ಉಪಾಧ್ಯಕ್ಷ ಇಸ್ಮಾಯಿಲ್ ಪಡ್ಪಿನಂಗಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಥಳೀಯ ಮಸೀದಿ ಮುದರ್ರಿಸ್ ಝಿಯಾದ್ ಸಕಾಫಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಗಾರದಲ್ಲಿ ಸುಳ್ಯ ರೀಜಿನಲ್ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜ ಕೊಚ್ಚಿ, ಕಡಬ ರಿಜಿನಲ್ ಅಧ್ಯಕ್ಷ ಅಬ್ದುಲ್ ಖಾದರ್ ಮಾಸ್ಟರ್, ಇಸ್ಮಾಯಿಲ್ ಹಾಜಿ ಬೈತಡ್ಕ, ಗಾಂಧಿನಗರ ಜುಮಾಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಮುಸ್ತಫಾ ಜನತಾ, ಎಲಿಮಲೆ ಜುಮಾ ಮಸೀದಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ, ಎಸ್ಎಂಎ ಮುಖಂಡರುಗಳಾದ ಹಸ್ಸನ್ ಸಕಾಫಿ ಬೆಳ್ಳಾರೆ, ಉಮ್ಮರ್ ಮುಸ್ಲಿಯಾರ್ ಮರ್ದಾಳ, ಮಹಮ್ಮದ್ ಅಲಿ ಸಕಾಫಿ ಗೂನಡ್ಕ, ಅಬ್ದುಲ್ ಲತೀಫ್ ಸಕಾಫಿ ಗೂನಡ್ಕ, ಸಂಶುದ್ದೀನ್ ಪಳ್ಳಿಮಜಲು, ಅಬ್ದುಲ್ ಹಮೀದ್ ಅಲ್ಫಾ ಬೆಳ್ಳಾರೆ, ಮೊದಲಾದವರು ಭಾಗವಹಿಸಿದ್ದರು.
ಸ್ಥಳೀಯ ಮಸೀದಿ ಆಡಳಿತ ಸಮಿತಿಯ ಪದಾಧಿಕಾರಿಗಳು ಸದಸ್ಯರು, ಸ್ಥಳೀಯ ನಿವಾಸಿಗಳು ಕಾರ್ಯಕ್ರಮಕ್ಕೆ ಸಹಕರಿಸಿದರು.
ಬೆಳ್ಳಾರೆ ಝೋನಲ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಅಹ್ಸನಿ ಸ್ವಾಗತಿಸಿ, ಅಬ್ಬಾಸ್ ಮುಸ್ಲಿಯರ್ ಬೈತಡ್ಕ ವಂದಿಸಿದರು.